ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು : ವಾರ್ಷಿಕ ಮಹಾಸಭೆ
Thumbnail
ಕಾಪು : ಪರಿಸರದ ಜನಪ್ರಿಯ ಆರ್ಥಿಕ ಸಂಸ್ಥೆ ಅಕ್ಷಯಧಾರ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ 2023–24ನೇ ಸಾಲಿನ ವಾರ್ಷಿಕ ಮಹಾಸಭೆ ಕಾಪು ಭಾಸ್ಕರ ಸೌಧದಲ್ಲಿ ಜರಗಿತು. ಸೊಸೈಟಿಯ ಅಧ್ಯಕ್ಷ ಲವ ಕರ್ಕೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಆರ್ಥಿಕ ಸಂಸ್ಥೆ ಮಧ್ಯಮ ವರ್ಗದ, ಸಣ್ಣ ಉದ್ದಿಮೆದಾರರ ಅಗತ್ಯತೆಗಳಿಗೆ ಸ್ಪಂದಿಸಿ, ಅವರ ಬೆಳವಣಿಗೆಗೆ ಪೂರಕವಾಗಿ ಸೇವೆ ಸಲ್ಲಿಸುತ್ತಿದೆ. ಸೊಸೈಟಿಯು ಗ್ರಾಹಕರಿಗೆ ಗುಣಮಟ್ಟದ ಸೇವೆ, ಸೌಲಭ್ಯ ನೀಡುತ್ತಿದ್ದು, ನಮ್ಮ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿ ಎಂದರು. ಶೇರುದಾರರಿಗೆ, ಠೇವಣಿದಾರರಿಗೆ ಹಾಗೂ ವಿವಿಧ ಖಾತೆಗಳನ್ನು ತೆರೆದು ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ಗ್ರಾಹಕರಿಗೂ ಅಭಿನಂದನೆ ಸಲ್ಲಿಸಿದರು. ಸೊಸೈಟಿಯ ಷೇರುದಾರರಾದ ಉಮನಾಥ ಬಂಗೇರ, ಶೀಲ ರಾಜ್ ಪುತ್ರನ್ ಪೊಲಿಪು, ಸೀತಾರಾಮ್ ಸಾಲಿಯನ್, ಸುಂದರ್ ಸುವರ್ಣ ಪೊಲಿಪು, ಸೀತಾಲಕ್ಷ್ಮಿ ಬ್ಯಾಂಕಿನ ಅಭಿವೃದ್ಧಿಯ ಬಗ್ಗೆ ಸಲಹೆ ಸೂಚನೆ ನೀಡಿದರು. ಈ ಸಂಧರ್ಭ ಸೊಸೈಟಿಯ ಶೇರುದಾರರಾದ ಹಾಗೂ ಸಂಸ್ಥೆಯ ಮಾರ್ಗದರ್ಶಕರಾಗಿದ್ದ ಈ ಬಾರಿ ಕಾಪು ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹರಿಣಾಕ್ಷಿ ದೇವಾಡಿಗ ಅವರನ್ನು ಸೊಸೈಟಿಯ ಪರವಾಗಿ ಸನ್ಮಾನಿಸಲಾಯಿತು. ಸೊಸೈಟಿಯ ಉಪಾಧ್ಯಕ್ಷರು, ನಿರ್ದೇಶಕರುಗಳು, ಸಿಬ್ಬಂದಿ, ಶೇರುದಾರರು, ಗ್ರಾಹಕರು, ಠೇವಣಿದಾರರು ಉಪಸ್ಥಿತರಿದ್ದರು. ನಿರ್ದೇಶಕ ಶಿವರಾಮ್ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಅಮಿತಾ ದೇವಾಡಿಗ ವಾರ್ಷಿಕ ವರದಿಯನ್ನು ಮಂಡಿಸಿದರು. ಸೊಸೈಟಿಯ ನಿರ್ದೇಶಕ ಜಗದೀಶ್ ಮೆಂಡನ್ ಗತ ವರ್ಷದ ಆಯ ವ್ಯಯ ಪಟ್ಟಿ ವಾಚಿಸಿದರು. ನಿರ್ದೇಶಕ ಪ್ರದೀಪ್ ಕುಮಾರ್ ಉಳಿಯರಗೋಳಿ ಸನ್ಮಾನಿತರನ್ನು ಪರಿಚಯಿಸಿದರು. ಅಮಿತಾ ದೇವದಾಸ್ ವಂದಿಸಿದರು.
Additional image
16 Sep 2024, 03:32 PM
Category: Kaup
Tags: