<b>ಆಸರೆ ಹೆಲ್ಪಿoಗ್ ಹ್ಯಾoಡ್ಸ್ ಉಡುಪಿ ಗೋವಿಗಾಗಿ ಮೇವು ಅಭಿಯಾನ</b>
Thumbnail
ಉಡುಪಿ : ಆಸರೆ ಹೆಲ್ಪಿoಗ್ ಹ್ಯಾoಡ್ಸ್ ಉಡುಪಿ ಇದರ ವತಿಯಿಂದ ಗೋವಿಗಾಗಿ ಮೇವು ಅಭಿಯಾನ ಸೆ.27ರಂದು ನೀಲಾವರ ಗೋ ಶಾಲೆಯಲ್ಲಿ ನಡೆಯಿತು. ಈ ಸಂದಭ೯ದಲ್ಲಿ ಆಶೀವ೯ಚನ ನೀಡಿದ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀಥ೯ ಶ್ರೀಪಾದರು, ಗೋವಿಗೆ, ಮೇವು ಕೊಡುವುದು ಪುಣ್ಯದ ಕಾಯ೯. ನಾವು ಬೆಳಿಗ್ಗೆ ಹಾಲು ಕುಡಿದಾಗ ಅದು ಯಾವ ದನದ ಹಾಲು ಎಂದು ತಿಳಿಯಲು ಅಸಾಧ್ಯ ಅದೇ ರೀತಿ ನಾವು ಹಿoದಿನ ಜನ್ಮದಲ್ಲಿ ಏನಾಗಿದ್ದೇವು ಗೊತ್ತಿಲ್ಲ ಹೀಗಾಗಿ ಪುಣ್ಯಕೋಟಿಗೆ ಆಹಾರ ನೀಡಿದರೆ ನಮ್ಮ ಜನ್ಮ ಸಾಥ೯ಕವಾಗಲು ಸಾಧ್ಯ ಎಂದರು. ಅಭಿಯಾನದ ಪ್ರಮುಖರಾದ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ ಶುಭ ಹಾರೈಸಿದರು.ಸಂಸ್ಥೆಯ ಪ್ರಮುಖರಾದ ಡಾII ಕೀತಿ೯ ಪಾಲನ್, ಜಗದೀಶ್ , ಬೇಬಿ ಶೆಟ್ಟಿ ಮುಂತಾದವರಿದ್ದರು. ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು,ಕವಾ೯ಲು ವಂದಿಸಿದರು.
Additional image
27 Sep 2020, 10:58 PM
Category: Kaup
Tags: