ಎಂ.ಕೆ.ರಮೇಶ ಆಚಾರ್ಯ ಕೊಲೆಕಾಡಿ ಅವರಿಗೆ ಸಮ್ಮಾನ
ಉಡುಪಿ ಕಿದಿಯೂರು ಇಲ್ಲಿಯ 'ಯಕ್ಷ ಆರಾಧನಾ ಟ್ರಸ್ಟ್' ವತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಯಕ್ಚಗಾನ ವೇಷಧಾರಿ ಎಂ .ಕೆ .ರಮೇಶ ಆಚಾರ್ಯ ಹಾಗೂ ಮಂಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಛಾಂದಸ ಗಣೇಶ ಕೊಲೆಕಾಡಿಯವರನ್ನು ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸಮ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ಸಂಶೋಧಕ ಕೆ.ಎಲ್. ಕುಂಡಂತಾಯ ವಹಿಸಿದ್ದರು .ಯಕ್ಷಗಾನ ವೇಷಧಾರಿ ,
ಬಲ್ಲಿರೇನಯ್ಯ ಪತ್ರಿಕೆಯ ಸಂಪಾದಕ ತಾರಾನಾಥ ವರ್ಕಾಡಿ ಅಭಿನಂದನಾ ಭಾಷಣಮಾಡಿದರು .
ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ವಿ.ಜಿ.ಶೆಟ್ಟಿ .ಬಾರಕೂರು ಕಾಳಿಕಾಂಬಾ ದೇವಸ್ಥಾನದ ಮಾಜಿ ಆಡಳಿತೆ ಮೊಕ್ತೇಸರರಾದ ಅಲೆವೂರು ಯೋಗೀಶ ಆಚಾರ್ಯ , ವಿಜಯಕುಮಾರ್ ಮುದ್ರಾಡಿ , ಶ್ರೀಮತಿ ನಿರುಪಮಾ ಶೆಟ್ಟಿ , ದಿವಾಕರ ಆಚಾರ್ಯ ಅವರು ಉಪಸ್ಥಿತರಿದ್ದರು . ಕೆ.ಜೆ.ಗಣೇಶ ಸ್ವಾಗತಿಸಿದರು , ಚಂದ್ರಕಾಂತ ಆಚಾರ್ಯ ವಂದಿಸಿದರು . ಜಗದೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಟ್ರಸ್ಟ್ ನ ಕೆ.ಜೆ.ಗಣೇಶ , ಕೆ.ಜೆ .ಸುಧೀಂದ್ರ ,ಕೆ.ಜೆ.ಕೃಷ್ಣ ಅವರು ಕಾರ್ಯಕ್ರಮ ಸಂಯೋಜಿಸಿದ್ದರು .ಬಳಿಕ ಬಾಲ ಕಲಾವಿದರಿಂದ ಯಕ್ಷ ನೃತ್ಯ ರೂಪಕ "ನರಕಚತುರ್ದಶಿ" ಪ್ರದರ್ಶನಗೊಂಡಿತು.
