ಸಾಧನೆಯ ಹಾದಿಯಲ್ಲಿ ಜನಮೆಚ್ಚಿದ ಗಾಯಕಿ ಸೌಜನ್ಯ
Thumbnail
ಸಾಧನೆ ಎನ್ನುವುದು ಯಾರದ್ದು ಮತ್ತು ಯಾವುದೇ ಹಂಗಿಲ್ಲದೆ ಮಾಡುವುದು. ಸಾಧನೆಯ ಹಾದಿಯಲ್ಲಿ ನಡೆಯುವವನಿಗೆ ಯಾವುದೇ ಅಹಂ ಇರಬಾರದು. ಅಂತಹ ಒಬ್ಬ ಸಾಮಾನ್ಯನಿಗೆ ಮಾತ್ರ ಸಾಧಕನಾಗಿ ಹೊರ ಹೊಮ್ಮಲು ಸಾಧ್ಯ. ತನ್ನ ಮುಗುಳುನಗೆ ಮತ್ತು ಮುಗ್ದ ಮನಸ್ಸಿನಿಂದ ಎಲ್ಲರ ಮನಸು ಗೆದ್ದ ಅದ್ಭುತ ಕಂಠದ ಹಾಡುಗಾರ್ತಿ ಸೌಜನ್ಯ. ಸುಳ್ಯ ತಾಲೂಕಿನ ಬೆಳ್ಳಾರೆಯ ಕೊಡಿಯಾಲ ಗ್ರಾಮದ ದಿ. ಕುಶಾಲಪ್ಪ ಮತ್ತು ದೇವಕಿ ದಂಪತಿಗಳ ಮೂರನೇಯ ಮಗಳು ಸೌಜನ್ಯ. ಸುಮಧುರ ಗಾಯನದ ಮೂಲಕ ಮನ ಸೆಳೆದಿರುವ ಈಕೆಗೆ ಸಂಗೀತವೇ ಉಸಿರು! ಹುಟ್ಟಿದ್ದು ಬಡ ಕುಟುಂಬದಲ್ಲಿ . ತನ್ನ ಜೀವನಕ್ಕಾಗಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಸಣ್ಣ ಪ್ರಾಯದಿಂದಲೂ ಸಂಗೀತ ಮತ್ತು ಹಾಡುವುದು ಎಂದರೆ ಎಲ್ಲಿ ಇಲ್ಲದ ಆಸಕ್ತಿ. ಆದರೆ ಇವರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ , ಪ್ರೋತ್ಸಾಹ ಮಾಡುವವರು ಇಲ್ಲದೇ ಸಂಗೀತದಲ್ಲಿ ಸಾಧನೆ ಮಾಡಲು ಸಾಧ್ಯವಾಗಿಲ್ಲ ಆದರೂ ತಾನು ಸಾಧನೆ ಮಾಡಬೇಕು, ಎಲ್ಲರೂ ಗುರುತಿಸಬೇಕು ಎನ್ನುವ ಕನಸು ಕನಸಾಗಿಯೇ ಉಳಿದಿತ್ತು. ಆದರೂ ತನ್ನ ಪ್ರಯತ್ನ ಬಿಡಲ್ಲಿಲ ಬೆಳ್ಳಾರೆ ಕಿರಣ್ ಕುಮಾರ್ ಗಾನಸಿರಿಯವರ ಬಳಿ ಒಂದು ವರ್ಷ ಸಂಗೀತ ಅಭ್ಯಾಸ ಮಾಡಿದ ನಂತರವು ಅಷ್ಟೊಂದು ವೇದಿಕೆಗಳು ಸಿಗಲಿಲ್ಲ. ಆದರೂ ಪ್ರಯತ್ನ ಬಿಡದ ಸೌಜನ್ಯ 2019 ರಲ್ಲಿ ಕರಾವಳಿ ಗಾನಕೋಗಿಲೆ ಆಯ್ಕೆಯಾದ ನಂತರ ಇವರ ಸಾಧನೆಯ ಪಯಣ ಮುಂದುವರಿಯಿತು. ತುಳುನಾಡಿನ ಹೆಮ್ಮೆಯ ಗಾಯಕ ಅರ್ವಿಂದ್ ವಿವೇಕ್ ರವರ ಕರಾವಳಿ ಗಾನಕೋಗಿಲೆ ಎನ್ನುವ ರಿಯಾಲಿಟಿ ಶೋ ದಲ್ಲಿ ಭಾಗವಹಿಸಿದ ಸೌಜನ್ಯ ಹಂತ ಹಂತವಾಗಿ ಸಂಗೀತದಲ್ಲಿ ಬೆಳೆಯಲಾರಂಭಿಸಿದ್ದರು. ಇವರ ಈ ಸಾಧನೆಗೆ ಅರ್ವಿಂದ್ ಮೆಲೋಡಿಸ್ ಟೀಮ್ ನ ಎಲ್ಲಾ ಸದ್ಯಸರು ಬೆಂಬಲವಾಗಿ ನಿಂತಿದ್ದಾರೆ ಅರ್ವಿಂದ್ ವಿವೇಕ್ ರವರ ತಂಡದ ಜೊತೆ ಗುರುತಿಸಿಕೊಂಡ ನಂತರ ಇವರು ಜನಪ್ರಿಯರಾದರು. ಭಾರತದಲ್ಲಿ ಮಾತ್ರ ಅಲ್ಲದೆ ವಿದೇಶದಲ್ಲಿಯೂ ಇವರ ಅಭಿಮಾನಿಗಳು ಇದ್ದಾರೆ. ಸದಾ ನಗು ಮುಖದ ಸೌಜನ್ಯ ನಿರಂತರ ಫೇಸ್ಬುಕ್ ಲೈವ್ ಶೋ ದಲ್ಲಿ ಕಾರ್ಯ ನಿರಾತರಾಗಿದ್ದಾರೆ. ಈಗ ಸೌಜನ್ಯ ಒಬ್ಬ ಜನಪ್ರಿಯ ಗಾಯಕಿ.!! ಜನಪ್ರಿಯ ಗಾಯಕಿ ಆದರೂ ಯಾವುದೇ ದೊಡ್ಡಸ್ತಿಕೆ ಇಲ್ಲದೆ ತನ್ನದೇ ಆದ ಬಟ್ಟೆ ಅಂಗಡಿ ತೆರೆದು ಟೈಲರಿಂಗ್ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅದೆಷ್ಟೋ ಜನರ ಮನಸ್ಸು ಗೆದ್ದಿರುವ ಈ ಅದ್ಭುತ ಕಂಠದ ಸೌಜನ್ಯ ಇವರಿಗೆ ಇವರು ಕಂಡ ಕನಸು ನನಸಾದರು ಇನ್ನು ದೊಡ ಸಾಧನೆ ಮಾಡಬೇಕು ಎನ್ನುವ ಆಸೆ ಇದೆ. ಅವರ ಆಸೆ ಆದಷ್ಟು ಬೇಗ ನೆರವೇರಲಿ ಇನ್ನಷ್ಟು ಅವಕಾಶ ಸಿಗಲಿ ಸರಸ್ವತಿ ದೇವಿಯ ಅನುಗ್ರಹ ಸದಾ ಇವರ ಮೇಲಿರಲಿ ಎಂದು ಹಾರೈಸುವ. ಲೇಖನ : ಪ್ರಶಾಂತ್ ಅಂಚನ್ ಮಸ್ಕತ್ತ್
Additional image Additional image
15 Dec 2020, 05:24 PM
Category: Kaup
Tags: