ಉಡುಪಿ : ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಯುವ ದಿನ ಕಾರ್ಯಕ್ರಮ
Thumbnail
ಉಡುಪಿ : ಸ್ವಾಮಿ ವಿವೇಕಾನಂದರ ಪ್ರಪಂಚಕ್ಕೆ ನೀಡಿದ ಜೀವನ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಹೊಸ ಪರಿವತ೯ನೆ ಸಾಧ್ಯ ಎಂದು ಶಿವಾನಿ ಡಯಾಗ್ನಿಸ್ಟಿಕ್ ಮತ್ತು ರಿಸಚ್೯ ಸೆಂಟರ್ ಮುಖ್ಯಸ್ಥ ಅಭಾವಿಪ ಹಿರಿಯ ಕಾಯ೯ಕತ೯ ಡಾII ಶಿವಾನಂದ ನಾಯಕ್ ಹೇಳಿದರು. ಅವರು ಉಪ್ಪೂರು ಬಳಿಯ ಹಿಂದುಳಿದ ವಗ೯ಗಳ ಬಾಲಕರ ವಿದ್ಯಾಥಿ೯ ನಿಲಯದಲ್ಲಿ ಎಬಿವಿಪಿ ವತಿಯಿಂದ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಯುವ ದಿನ ಕಾರ್ಯಕ್ರಮದಲ್ಲಿ ಹೇಳಿದರು. ಸ್ವಾಮೀಜಿಯವರು ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮೀಸಲಾಗಿಟ್ಟಿದ್ದರು. ಅವರು ಯುವಕರ ಮೇಲೆಟ್ಟ ನಂಬಿಕೆ ವಿಶೇಷವಾಗಿತ್ತು. ತಮ್ಮ ಕಿರಿಯ ಪ್ರಾಯದಲ್ಲಿ ಅತ್ಯಂತ ಹಿರಿದಾದ ಕಾಯ೯ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಭಾಷಣ ಚಾರಿತ್ರಿಕವಾದದ್ದು ಇಂದು ಭಾರತೀಯರಿಗೆ ವಿದೇಶದಲ್ಲಿ ಉತ್ತಮ ಗೌರವ ಸಿಗಲು ಇದು ಕಾರಣವಾಗಿದೆ ಎಂದರು. ಅತಿಥಿಯಾಗಿ ಸ್ವಚ್ಚ ಭಾರತ ಫ್ರೇoಡ್ಸ್ ಸಂಯೋಜಕ ರಾಘವೇಂದ್ರ ಪ್ರಭು,ಕವಾ೯ಲು ಪ್ರಸ್ಥಾವನೆಗೈದರು. ಕಾಯ೯ಕತ೯ ಅಶಿಷ್ ಶೆಟ್ಟಿ ನಿರೂಪಿಸಿದರು.ವಾಡ೯ನ್ ಗುರು ರಾವ್ ವಂದಿಸಿದರು.
16 Jan 2021, 05:04 PM
Category: Kaup
Tags: