ಎಮ್ ಆರ್ ಜಿ ಗ್ರೂಪಿನ ಆಡಳಿತ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿರವರಿಗೆ ಭಾರತೀಯ ವ್ಯವಹಾರಗಳ ದೂರದೃಷ್ಟಿಯ ನಾಯಕ 2020 ಪ್ರಶಸ್ತಿ
Thumbnail
ನೆಟ್ ವಕ್೯ ಮೀಡಿಯಾ ಗ್ರೂಪ್ ಇದರ ಪ್ರಧಾನ ಸಂಪಾದಕ ಹಾಗೂ 11 ನೇ ವಾರ್ಷಿಕ ಭಾರತ ನಾಯಕತ್ವ ಕಾನ್ಕ್ಲೇವ್ ಮತ್ತು ಭಾರತೀಯ ವ್ಯವಹಾರಗಳ ನಾಯಕತ್ವ ಪ್ರಶಸ್ತಿಗಳ ತೀರ್ಪುಗಾರರ- ಅಧ್ಯಕ್ಷರಾದ ಸತ್ಯ ಬ್ರಹ್ಮ ಅವರು ಉಧ್ಯಮಿ ಎಂ.ಆರ್.ಜಿ. ಸಮೂಹದ ಕಾರ್ಯಾಧ್ಯಕ್ಷ ಉದ್ಯಮಿ ಕೆ. ಪ್ರಕಾಶ್ ಶೆಟ್ಟಿರವರಿಗೆ ಭಾರತೀಯ ವ್ಯವಹಾರಗಳ ದೂರದೃಷ್ಷಿಯ ನಾಯಕ 2020 ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ತೀರ್ಪುಗಾರರಾದ ಸತ್ಯ ಬ್ರಹ್ಮ ಮತ್ತು ಗೂಗಲ್ ಹುಡುಕಾಟದಿಂದ ಇದು ಪ್ರತಿಷ್ಠಿತ ಪ್ರಶಸ್ತಿ ಎಂದು ಸ್ಪಷ್ಟವಾಗಿದೆ. ಸಾರ್ವಜನಿಕ ಮತದಾನ ಮತ್ತು ಮುಖ್ಯವಾಗಿ ತೀರ್ಪುಗಾರರ ಮತದಾನದ ನಂತರ ಅವರು ಈ ಪ್ರಶಸ್ತಿಯನ್ನು ತನ್ನದಾಗಿರಿಸಿದ್ದಾರೆ. ಕೋವಿಡ್ ಪರಿಸ್ಥಿತಿಯಿಂದಾಗಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯದೆ, ಈ ಪ್ರಶಸ್ತಿಯನ್ನು ಅವರ ಕಚೇರಿಗೆ ಕಳುಹಿಸಲಿದ್ದಾರೆ. ಪ್ರಶಸ್ತಿ ಪಡೆದ ನಂತರ ಅವರು ಪ್ರಶಸ್ತಿ ಮತ್ತು 40 ಸೆಕೆಂಡ್ ಭಾಷಣದೊಂದಿಗೆ ಅವರ ಫೋಟೋವನ್ನು ಕೋರಲಾಗಿದೆ ಎಂದು ತಿಳಿದುಬಂದಿದೆ. ಇದನ್ನು ಟಿವಿ ಚಾನೆಲ್‌ಗಳು ಮತ್ತು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿಯವರು ಭಾರತದಲ್ಲಿ ೧೯೯೩ ರಿಂದ ರಿಯಲ್ ಎಸ್ಟೇಟ್ ಮತ್ತು ಹೊಸ್ಪಿಟಾಲಿಟಿ ಉದ್ಯಮದಲ್ಲಿ ಒರ್ವ ಉನ್ನತಮಟ್ಟದ ಯಶಸ್ವೀ ಉದ್ಯಮಿಯಾಗಿ ಗುರುತಿಸಲ್ಪಟ್ಟಿದ್ದು ಹಲವೆಡೆ ಶಾಖೆಗಳನ್ನು ಹೊಂದಿರುವ ಗೋಲ್ಡ್ ಪಿಂಚ್ ಹೋಟೇಲ್ಸ್, ಅಂತರಾಷ್ಟ್ರೀಯ ಮಟ್ಟದ ಕೋರ್ಟ್ ಯಾರ್ಡ್ ಬೈ ಮಾರಿಯೋಟ್ ಹೋಟೇಲು, ಡಬ್ಬಲ್ ಟ್ರೀ ಬೈ ಹಿಲ್ಟನ್ ಮಾತ್ರವಲ್ಲದೆ ಮುಂದೆ ಹಲವಾರು ಹೋಟೇಲುಗಳು, ಕಟ್ಟಡಗಳು, ಕಮರ್ಶಿಯಲ್ ಕಾಂಪ್ಲೆಕ್ಸ್ ಗಳನ್ನು ನಿರ್ಮಿಸಿ ಅನೇಕ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವ ಯೋಜಗೆ ಇವರದ್ದಾಗಿದೆ. ದೇಶದ ಇತರ ಐದು ಕಂಪೆನಿಗಳ ಪ್ರಮುಖರಾದ ಆರ್. ಜೆ. ಕಾರ್ಪೊರೇಶನಿನ ರವಿ ಜಯಪುರಿಯಾ, ಸಮವರ್ಧನ್, ಮದರ್ ಸನ್ ಗ್ರೂಪ್ ನ ಕಾರ್ಯಾಧ್ಯಕ್ಷ ವಿವೇಕ್ ಚಾಂದ್ ಸೆಹಗಲ್, ಆರ್. ಜಿ. ಗ್ರೂಪ್ ನ್ ಡಾ. ರವೊ ಪಿಳ್ಳೆ, ಹೆವೆಲ್ಸ್ ಇಂಡಿಯಾದ ಅನಿಲ್ ರಾಯ್ ಗುಪ್ತಾ, ಹರಪ್ಪ ಅಜ್ಯುಕೇಶನಿನ ಪ್ರಮಥ್ ರಾಜ್ ಸಿನ್ಹಾ ಈ ಪ್ರಶಸ್ತಿಯ ಅಂತಿಮ ಆಯ್ಕೆಯಲ್ಲಿದ್ದು ಕೆ. ಪ್ರಕಾಶ್ ಶೆಟ್ಟಿಯವರು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಮೊದಲು ಈ ಪ್ರಶಸ್ತಿಯು ಹಲವು ಪ್ರಸಿದ್ದ ಉದ್ಯಮಿಗಳಿಗೆ ದೊರಕಿದ್ದು ಅದರಲ್ಲಿ ರತನ್ ಟಾಟ, ನಾರಾಯಣ ಮೂರ್ತಿ, ಮುಕೇಶ್ ಅಂಬಾನಿ, ಕಿರಣ್ ಮುಜುಮ್ ದಾರ್ , ಪ್ರಿಯಾಂಕ ಚೋಪ್ರಾ ಮೊದಲಾದವರು ಸೇರಿದ್ದಾರೆ.
Additional image
30 Jan 2021, 10:06 AM
Category: Kaup
Tags: