ಕಾಪು : ಕಾಪು ತಾಲೂಕಿನ ಪಾದೂರು ಗ್ರಾಮದ ಕುರಲ್ ರೆನ್ನಿ ಕುಂದರ್ ಎಂಬುವವರ ಮನೆಯ ಹತ್ತಿರ ಕಾಣಿಸಿಕೊಂಡ ಚಿರತೆಯನ್ನು ಬೋನಿನ ಮೂಲಕ ಅರಣ್ಯ ಇಲಾಖೆಯ ಸಿಬ್ಬಂದಿಯ ಸಹಾಯದಿಂದ ಹಿಡಿಯಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಡಿವೈ ಆರ್ ಎಫ್ ಒ ಜೀವನ್ ದಾಸ್ ಶೆಟ್ಟಿ, ಡಿವೈ ಆರ್ ಎಫ್ ಗುರುಪ್ರಸಾದ್, ಎಸಿಎಫ್ಒ ಕ್ಲಿಫಡ್೯ ಲೋಬೋ, ಫಾರೆಸ್ಟ್ ಗಾಡ್೯ಗಳಾದ ಎಚ್ ಜಯರಾಮ್ ಶೆಟ್ಟಿ, ಅಭಿಲಾಷ್, ಪರಶುರಾಮ್ ಭಾಗವಹಿಸಿದ್ದರು.