ಕುಂದಾಪುರ ಜೂ.7 : ಕೋವಿಡ್ ಎರಡನೇ ಅಲೆಯಿಂದ ಜನ ಜೀವನ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಈ ಕೊರೋನ ಲಾಕ್ಡೌನ್ ಹಲವರ ತುತ್ತಿನ ಅನ್ನ ಕುಸಿದಿದೆ. ಅದರಲ್ಲೂ ಲಾರಿ ಚಾಲಕರ ಸ್ಥಿತಿಯಂತೂ ಅತೀ ದಾರುಣವಾಗಿದೆ. ಕೋವಿಡ್ ಕರ್ಫ್ಯೂ ಘೋಷಣೆ ಆದ ಬಳಿಕ ಹೆದ್ದಾರಿಯಲ್ಲಿ ಕೈ ಬೆರಳೆಣಿಕೆಯಷ್ಟೇ ಹೋಟೆಲ್ ತೆರೆಯದೇ ಇರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದು ಶ್ರೀನಾರಾಯಣ ಗುರು ಯುವಕ ಮಂಡಲ (ರಿ.) ಕುಂದಾಪುರ ವತಿಯಿಂದ ಲಾರಿ ಚಾಲಕರಿಗೆ ಸರಿಸುಮಾರು 250 ಊಟವನ್ನು ಕುಂದಾಪುರ ಮಾಜಿ ಪುರಸಭಾಧ್ಯಕ್ಷ ಅಧ್ಯಕ್ಷೆ ಶ್ರೀಮತಿ ಗುಣರತ್ನರವರ ನೆರವಿನಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ಯುವಕ ಮಂಡಲ (ರಿ.) ಅಧ್ಯಕ್ಷ ಶ್ರೀನಾಥ್ ಕಡ್ಗಿ ಮನೆ, ಗೌರವಾಧ್ಯಕ್ಷರಾದ ಅಶೋಕ್ ಪೂಜಾರಿ, ಕಾರ್ಯದರ್ಶಿಯಾದ ವಿಜಯ ಕೋಣಿ, ಉಪಾಧ್ಯಕ್ಷರಾದ ಯೋಗೀಶ್ ಕೋಡಿ,ಅಜಿತ್ ಚರ್ಚ್ ರೋಡ್, ನಿರ್ದೇಶಕರದಂತಹ ಭಾಸ್ಕರ ವಿಠಲವಾಡಿ ರಾಜೇಶ್ ಕಡ್ಗಿ ಮನೆ ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.