ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕುಲಾಲ ಸಂಘ ನಾನಿಲ್ತಾರ್, ಮುಂಡ್ಕೂರು ವತಿಯಿಂದ ಆಹಾರ ಕಿಟ್ ವಿತರಣೆ

Posted On: 15-06-2021 02:55PM

ಕಾರ್ಕಳ : ಮುಂಡ್ಕೂರು ಭಾಗದ ನಾನಿಲ್ತಾರ್ ಕುಲಾಲ ಸಂಘದ ವತಿಯಿಂದ ತೀರಾ ಆರ್ಥಿಕವಾಗಿ ಹಿಂದುಳಿದ ಕುಟುಂಬವನ್ನ ಗುರುತಿಸಿ ಆಹಾರ ಕಿಟ್ ವಿತರಣೆ ಸಂಘದ ಸಭಾಭವನ ದಲ್ಲಿ ನಡೆಯಿತು.

ಸರಿಸುಮಾರು ಇನ್ನೂರು ಕೆಜಿ ಅಕ್ಕಿ ಹಾಗೂ ಇಪ್ಪತ್ತು ಕೆಜಿ ಸಕ್ಕರೆಯನ್ನ ಫಲಾನುಭವಿ ಗಳಿಗೆ ಈ ಸಂದರ್ಭ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಕುಶ ಆರ್. ಮೂಲ್ಯ, ಕಾರ್ಯದರ್ಶಿ ದಿನೇಶ್ ಕುಲಾಲ್, ಯುವ ವೇದಿಕೆ ಅಧ್ಯಕ್ಷರು ದೀಪಕ್ ಕುಲಾಲ್, ಬಿ ವಾರಿಜ, ಆಶಾ ವರದರಾಜ, ಯೋಗೀಶ್ ಕುಲಾಲ್ ಬೋಳ ಉಪಸ್ಥಿತರಿದ್ದರು. .