ಕುರ್ಕಾಲು ಯುವಕ ಮಂಡಲದಿಂದ ಹೊಸ ಬೆಳಕು ವೃದ್ಧಾಶ್ರಮಕ್ಕೆ ವಿವಿಧ ಸವಲತ್ತು ಕೊಡುಗೆ
Posted On:
22-06-2021 11:34AM
ಕಾಪು : ಕುರ್ಕಾಲು ಯುವಕ ಮಂಡಲ (ರಿ.) ಕುರ್ಕಾಲು ವತಿಯಿಂದ ಕೊರೋನ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾದ ಮಣಿಪಾಲದ ಸರಳಬೆಟ್ಟುವಿನಲ್ಲಿರುವ ಹೊಸ ಬೆಳಕು ವೃದ್ಧಾಶ್ರಮಕ್ಕೆ ರೂ.13,353/- ವೆಚ್ಚದಲ್ಲಿ ವಾಟರ್ ಹೀಟರ್, ವಾಟರ್ ಬೆಡ್, ಸಿಹಿ ತಿಂಡಿ ಹಾಗೂ ಆಶ್ರಮದಲ್ಲಿರುವ ಪಶುಗಳಿಗೆ ಪಶು ಆಹಾರ ನೀಡಲಾಯಿತು.
ಸುಮಾರು 40 ಜನ ವೃದ್ಧರು, ಹಲವು ಅನಾಥ ದನ ಕರುಗಳು ಈ ಆಶ್ರಮದಲ್ಲಿದೆ.
ಈ ಸಂದರ್ಭ ಕುರ್ಕಾಲು ಯುವಕ ಮಂಡಲದ ಅಧ್ಯಕ್ಷರಾದ ಪ್ರಸನ್ನ ಶೆಟ್ಟಿ, ಸದಸ್ಯರಾದ ಸುವಿತ್ ಶೆಟ್ಟಿ, ಸಂತೋಷ್ ಶೆಟ್ಟಿ, ಸುಮಿತ್ ಶೆಟ್ಟಿ ಉಪಸ್ಥಿತರಿದ್ದರು.