ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಕಾಪು, ಕಾಪು ಒಕ್ಕೂಟ, ಕಾಪು ಎ ಒಕ್ಕೂಟ ಹಾಗು ಕಾಪು ಪಡು ಒಕ್ಕೂಟದ ಸ್ವಸಹಾಯ ಸಂಘದ ಸದಸ್ಯರಿಗೆ ಲಾಭಾಂಶ ನೀಡುವ ಕಾರ್ಯಕ್ರಮವನ್ನು ವೆಂಕಟೇಶ್ ನಾವುಡ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಹಾದೇವಿ ಶಾಲೆಯ ಮುಖ್ಯೋಪಾಧ್ಯಾಯರು, ಪುರಸಭೆಯ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಸುಲೋಚನ ಬಂಗೇರ, ಕಾಪು ಒಕ್ಕೂಟದ ಮೇಲ್ವಿಚಾರಕರಾದ ಮಮತಾ, ಒಕ್ಕೂಟದ ಉಪಾಧ್ಯಕ್ಷರಾದ ರಮಾ ಶೆಟ್ಟಿ, ಪಡು ಒಕ್ಕೂಟದ ಕೋಶಾಧಿಕಾರಿ ಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.