ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ತಮ್ಮೆಲ್ಲರ ಸಹಾಯದ ನಿರೀಕ್ಷೆಯಲ್ಲಿ ಕಾಪುವಿನ ಮರ್ಣೆ ನಿವಾಸಿ ಸುಂದರ ಮೂಲ್ಯ.

Posted On: 11-07-2021 08:05PM

ಕಾಪು : ಕೃಷಿಯನ್ನೇ ನಂಬಿಕೊಂಡು ಹೈನುಗಾರಿಕೆಯಿಂದ ಬಂದ ಅಲ್ಪಸ್ವಲ್ಪ ಆದಾಯದಿಂದ ಬಡತನವಿದ್ದರೂ ತನ್ನ ಎರಡು ಹೆಣ್ಣು ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಿಸುತ್ತಾ ಜೀವನ ಸಾಗಿಸುತ್ತಿದ್ದ ಸುಂದರ ಮೂಲ್ಯ ಮರ್ಣೆ ಇವರಿಗೆ ಮಹಾಮಾರಿ ಕೋರೋನ ರೋಗ ಬಂದು ಜೀವಣ್ಮರಣ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿ ಇದೀಗ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುಮಾರು ಆರು ತಿಂಗಳವರೆಗೆ ಅವರಿಗೆ ಮನೆಯಲ್ಲಿಯೆ ಆಕ್ಸಿಜನ್ ವ್ಯವಸ್ಥೆ ಮಾಡುವಂತೆ ವೈದ್ಯರು ತಿಳಿಸಿದಾಗ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಜ್ವಲ್ ಹೆಗ್ಡೆಯವರು ಸ್ನೇಹಿತರೊಡಗೂಡಿ ಆಕ್ಸಿಜನ್ ವ್ಯವಸ್ಥೆ ಮಾಡಿರುತ್ತಾರೆ.

ಈ ಬಗ್ಗೆ ಪಟ್ಲ ಸ್ಪೋರ್ಟ್ ಕ್ಲಬ್ ನ ಅಧ್ಯಕ್ಷರಾದ ದಿನೇಶ್ ಮೂಲ್ಯ ಪಟ್ಲ ಅವರಲ್ಲಿ ವಿನಂತಿಸಿಕೊಂಡಾಗ ಸಹಾಯ ಹಸ್ತ ನೀಡಿರುತ್ತಾರೆ. ಈ ಬಡಕುಟುಂಬ ಮುಂದಿನ ವ್ಯವಸ್ಥೆ ಗಾಗಿ ತಮ್ಮೆಲ್ಲರ ಸಹಾಯದ ನಿರೀಕ್ಷೆಯಲ್ಲಿದೆ.

ಸಹಾಯ ಮಾಡಲಿಚ್ಚಿಸುವವರ ಗಮನಕ್ಕೆ: 1) Sulochana A/ c: 81860100004538 IFSC Code: BARBOVJATHR MICR code: 576012004 Baroda Bank At ಪ್ರಜ್ವಲ್ ಹೆಗ್ಡೆ ಮರ್ಣೆ:9743230619 ದಿನೇಶ್ ಮೂಲ್ಯ ಮರ್ಣೆ: 9964028397