ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶ್ರೀ ಶ್ರೀ ಮೋಹನ್ (ಪಾತ್ರಿ) ಮುದ್ರಾಡಿರವರಿಗೆ ಬೈದಶ್ರೀಯ ವತಿಯಿಂದ ಶ್ರದ್ಧಾಂಜಲಿ

Posted On: 22-07-2021 10:14PM

ಕಾಪು : ದೈವ ದತ್ತ ಚಿಂತನೆಗಳ ಫಲವೋ ಎಂಬಂತೆ ಮುದ್ರಾಡಿ ಊರಿನಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಸಹಿತ ದೇವಾಲಯಗಳ ಸಂಕೀರ್ಣ ನಿರ್ಮಿಸಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ ಮುದ್ರಾಡಿ ನಾಟ್ಕದೂರು ಶ್ರೀ ಶ್ರೀ ಮೋಹನ್ (ಪಾತ್ರಿ) ಸ್ವಾಮೀಜಿ ಯವರಿಗೆ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿ ಉಡುಪಿ ವತಿಯಿಂದ ಶ್ರದ್ದಾಂಜಲಿ ಅರ್ಪಿಸಲಾಯಿತು.