ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕುತ್ಯಾರು : ಗಿಂಡೆದ ನೀರ್ ಕಿರುಚಿತ್ರ ಬಿಡುಗಡೆ

Posted On: 31-07-2021 04:35PM

ಕಾಪು : ಲವ್ಲಿ ಫ್ರೆಂಡ್ಸ್ ಕುತ್ಯಾರು ಯುಟ್ಯೂಬ್ ಚಾನೆಲ್ ನ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಂಡ ಅತಿಥ್ ಸುವರ್ಣ ಪಾಲಮೆ ರಚನೆ, ನಿರ್ದೇಶನ, ನಟನೆ ಮಾಡಿರುವ ತುಳುನಾಡಿನ ದೈವಾರಾಧನೆಯ ಕಲೆ-ಕಾರ್ಣಿಕವನ್ನು ಬಿಂಬಿಸುವ ಕಿರುಚಿತ್ರ ಗಿಂಡೆದ ನೀರ್ ಬಿಡುಗಡೆ ಸಮಾರಂಭ ಜುಲೈ 30ರಂದು ಕುತ್ಯಾರು ಅರಮನೆಯಲ್ಲಿ ಜರಗಿತು.

ಕುತ್ಯಾರು ಅರಮನೆಯ ಪ್ರತಿನಿಧಿ, ಶಿರ್ವ ರೋಟರಿ ಕ್ಲಬ್ ಕಾರ್ಯದರ್ಶಿ ದಿನೇಶ್ ಬಳ್ಳಾಲ್ ಕಿರು ಚಿತ್ರವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು ಸ್ಥಳೀಯ ಯುವಕ, ಯುವತಿಯರೇ ಸೇರಿ ತುಳುನಾಡಿನ ದೈವ ದೇವರ ಬಗೆಗಿನ ಇತಿಹಾಸ ಬಿಂಬಿಸುವ ಇಂತಹ ಕಿರುಚಿತ್ರ ನಿರ್ಮಿಸುವ ಮುಖೇನ ಯುವಜನತೆ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಬೇಕಾಗಿದೆ. ಮುಂದಿನ ಸಮಾಜಕ್ಕೆ ಅಭಿರುಚಿ ಬೆಳೆಸುವಂತಾಗಲಿ ಎಂದು ಶುಭ ಹಾರೈಸಿದರು.

ಕುತ್ಯಾರು ಪರಶುರಾಮೇಶ್ವರ ಕ್ಷೇತ್ರದ ಧರ್ಮದರ್ಶಿ ಶ್ರೀ ಶಂಭುದಾಸ ಗುರೂಜಿ, ಕುತ್ಯಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಧೀರಜ್ ಶೆಟ್ಟಿ ಶುಭಾಶಯ ಕೋರಿದರು. ಈ ಸಂದರ್ಭ ಕುತ್ಯಾರು ಗ್ರಾಮ ಪಂಚಾಯತ್ ಸದಸ್ಯ ಸಂಪತ್ ಕುಮಾರ್, ಬಿಲ್ಲವ ಸೇವಾ ಸಂಘ (ರಿ.) ಶಿರ್ವ ಇದರ ಕಾರ್ಯದರ್ಶಿ ಸುಜನ್ ಎಲ್. ಸುವರ್ಣ, ಯುವಕ ಮಂಡಲ ಕುತ್ಯಾರು ಅಧ್ಯಕ್ಷ ಪ್ರವೀಣ್ ಆಚಾರ್ಯ, ಕುತ್ಯಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಧೀರಜ್ ಕುಲಾಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಅತಿಥ್ ಸುವರ್ಣ ಕಿರು ಚಿತ್ರದ ಬಗ್ಗೆ ತಿಳಿಸಿದರು. ಶ್ರೇಯ ಸ್ವಾಗತಿಸಿ, ಶ್ರೇಯಸ್ ಕಾರ್ಯಕ್ರಮ ನಿರೂಪಿಸಿ, ಅಭಿಷೇಕ ಆಚಾರ್ಯ ವಂದಿಸಿದರು.