ಉಡುಪಿ : ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿ ಉಡುಪಿ ಇಲ್ಲಿ 75 ನೇ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ವನ್ನು ಹಿರಿಯ ವಿಶ್ವಸ್ತರಾದ ತೇಜಪ್ಪ ಬಂಗೇರ ನೆರವೇರಿಸಿದರು.
ಅಧ್ಯಕ್ಷರಾದ ದಾಮೋದರ್ ಕಲ್ಮಾಡಿ, ಹಿರಿಯರಾದ ಶಿವರಾಮ ಪೂಜಾರಿ, ಸಂಜೀವ ಪೂಜಾರಿ, ಶೇಖರ್ ಪೂಜಾರಿ, ಚೆಲುವರಾಜ್ ಪೆರಂಪಳ್ಳಿ, ಗಂಗಾಧರ್ ಕಿದಿಯೂರ್, ಕೋಶಾಧಿಕಾರಿ ಮಹೇಶ್ ಎನ್, ಕಾರ್ಯದರ್ಶಿ ಎಮ್. ಮಹೇಶ್ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು.