ಕಾಪು : ಕುತ್ಯಾರು ಗ್ರಾಮಪಂಚಾಯತ್ ನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಕುತ್ಯಾರು ಗ್ರಾಮದ ನಿವೃತ್ತ ಯೋಧ ಶ್ರೀಧರ ಕುಲಾಲ್ ನೆರವೇರಿಸಿದರು.
ಸನ್ಮಾನ : ನಿವೃತ್ತ ಯೋಧರಾದ ಕೇಂಜ ಜೋಸೆಫ್ ಡಿಸೋಜ ಮತ್ತು ಶ್ರೀಧರ ಕುಲಾಲ್ ರನ್ನು ಸನ್ಮಾನಿಸಲಾಯಿತು
ಈ ಸಂದರ್ಭ ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಎಸ್. ಆಚಾರ್ಯ, ಉಪಾಧ್ಯಕ್ಷ ದೇವರಾಜ ಬಿ. ಶೆಟ್ಟಿ, ಪಿಡಿಓ ರಜನಿ ಭಟ್, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.