ಕಾಪು : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೈತ ಬಂಧು ಅಭಿಯಾನದ ಅಂಗವಾಗಿ ನಾಗೇಶ ಕಾಮತ್ ಕಟಪಾಡಿ ಇವರ ಸ್ಥಳದಲ್ಲಿ ಪ್ರಪ್ರಥಮ ಎರೆಹುಳು ಗೊಬ್ಬರ ತೊಟ್ಟಿ ಘಟಕ ರಚನೆಗೆ ಕಟಪಾಡಿ ಗ್ರಾಮ ಪಂಚಾಯತ್ ವತಿಯಿಂದ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಪಿಡಿಒ ಮಮತಾ ವೈ. ಶೆಟ್ಟಿ, ಅಧ್ಯಕ್ಷೆ ಇಂದಿರಾ ಎಸ್. ಆಚಾರ್ಯ, ಉಪಾಧ್ಯಕ್ಷ ಎ. ಆರ್. ಅಬುಬಕ್ಕರ್, ಸದಸ್ಯರುಗಳಾದ ಪ್ರಭಾ ಬಿ. ಶೆಟ್ಟಿ, ಸುಗುಣ ಪೂಜಾರ್ತಿ, ವೀಣಾ ಎನ್, ಆಗ್ನೆಸ್ ಡೇಸ, ವಿಜಯ್ ಮಾಬಿಯನ್, ಪ್ರಭಾಕರ್ ಪಾಲನ್, ಪ್ರಸೀನ್ ಜಿ. ಪೂಜಾರಿ, ಲೆಕ್ಕ ಪರಿಶೋಧಕ ವಿಜಯ್ ಉದ್ಯಾವರ, ಕೆ.ಗೋಕುಲ್ ದಾಸ್ ಕಾಮತ್ ,ಶೈಲಾ ಜಿ. ಕಾಮತ್ ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಇನ್ನಿತರರು ಉಪಸ್ಥಿತರಿದ್ದರು .