ಕಾಪು : ತೆಂಗು ಮತ್ತು ಅಡಿಕೆ ಮರ ಹತ್ತುವವರನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ
ಸೇರ್ಪಡೆಗೊಳಿಸುವ ಬಗ್ಗೆ ಕೇಂದ್ರ ಕೃಷಿ ಮತ್ತು ರೈತ ಸಬಲೀಕರಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆಗೆ ಉಡುಪಿ ಜಿಲ್ಲೆಯ ತೆಂಗು ಮತ್ತು ಅಡಿಕೆ ಬೆಳೆಗಾರರ ಪ್ರಕೋಷ್ಟದ ಪರವಾಗಿ ಸಂಚಾಲಕರಾದ ಪ್ರಾಣೇಶ್ ಹೆಜಮಾಡಿ ಮನವಿ ಸಲ್ಲಿಸಿದರು.
ಈ ಸಂದರ್ಭ ನಮ್ಮ ಜಿಲ್ಲೆ, ರಾಜ್ಯದಲ್ಲಿ ತೆಂಗು ಮತ್ತು ಮರ ಹತ್ತುವವರು ಬಹಳ ಸಂಖ್ಯೆಯಲ್ಲಿದ್ದು ಅವರ ಜೀವನ ಸ್ಥಿತಿ ಗತಿಗಳ ಬಗ್ಗೆ, ಅಸಂಘಟಿತ ಕಾರ್ಮಿಕ ವರ್ಗದಲ್ಲಿ 42 ಅಂಶಗಳನ್ನು ಒಳಗೊಂಡ ಕೆಲಸ ಮಾಡುವವರು ಇದ್ದು, ಅದರಲ್ಲಿ ತೆಂಗು ಮತ್ತು ಮರ ಹತ್ತುವವರು ಬರುವುದಿಲ್ಲ. ಅದೇಷ್ಟೋಮಂದಿ ತೆಂಗು ಮತ್ತು ಅಡಿಕೆ ಮರ ಹತ್ತುವವರು ಅಕಸ್ಮಾತಾಗಿ ಬಿದ್ದು ದುರ್ಮರಣಕ್ಕೀಡಾಗಿ ಸಾವನಪ್ಪಿರುತ್ತಾರೆ. ಕೆಲವರಂತು ಜೀವನ ಪರ್ಯಂತ ಹಾಸಿಗೆಯಲ್ಲಿಯೇ ಕಾಲ ಕಳೆದವರೂ ಇದ್ದಾರೆ. ಇವರಿಗೆ ಸರಕಾರದ ಸವಲತ್ತು ಸಿಗದೇ ಇರುವುದು ದುರದೃಷ್ಟಕರವಾಗಿದೆ. ಇತ್ತೀಚೆಗೆ ಕಾರ್ಮಿಕ ಸಚಿವರು ರಿಕ್ಷಾ ಹಾಗೂ ಬಸ್ಸು ಚಾಲಕರಿಗೆ ಅಕಸ್ಮತ್ ಸಾವನಪ್ಪಿದ್ದರೆ 5 ಲಕ್ಷ ನೀಡುವ ಬಗ್ಗೆ ಘೋಷಣೆ ಮಾಡಿರುತ್ತಾರೆ . ಅಂತೆಯೇ ತೆಂಗು ಮತ್ತು ಅಡಿಕೆ ಮರ ಹತ್ತುವವರು ಅಸಂಘಟಿತ ಕಾರ್ಮಿಕ ವರ್ಗದ (43) ಇತರ ವರ್ಗ (ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ 2008ರ ಕಾಲಂ 2(ಎಮ್) ಹಾಗೂ ಕಾಲಂ 2(1) ವ್ಯಾಖ್ಯಾನಕ್ಕೆ ) ಒಳಪಡಿಸಬೇಕೆಂದು ವಿನಂತಿಸಿದರು.