ಅದಮಾರು : ಸರ್ವೋದಯ ಸಮುದಾಯ ಭವನದಲ್ಲಿ ಕೋವಿಡ್ 19 ಲಸಿಕೆ - 472 ಫಲಾನುಭವಿಗಳು
Posted On:
22-08-2021 11:48AM
ಕಾಪು : ಪ್ರಾಥಮಿಕ ಆರೋಗ್ಯ ಕೇಂದ್ರ ಮುದರಂಗಡಿ , ಇವರ ವತಿಯಿಂದ ಎಲ್ಲೂರು ಪಂಚಾಯತ್ ಆಯೋಜಿಸಿರುವ 'ಕೊವಿಡ್ 19'
ಲಸಿಕೆ ಹಾಕುವ ಅಭಿಯಾನವು ಅದಮಾರು ಆದರ್ಶ ಯುವಕ ಸಂಘದ ಸರ್ವೋದಯ ಸಮುದಾಯ ಭವನದಲ್ಲಿ ನಡೆಯಿತು. ಎಲ್ಲೂರು ಗ್ರಾಮದಲ್ಲೆ ದಾಖಲೆಯ ಪ್ತಮಾಣದಲ್ಲಿ 472 ಮಂದಿ ವ್ಯಾಕ್ಸಿನ್ ಪಡೆದರು.
450ಮಂದಿಯ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಅದಮಾರು ಪರಿಸರದ ತೊಂಬತ್ತ ನಾಲ್ಕು ವರ್ಷ ಹರೆಯದ ಹಿರಿಯ, ನಿವೃತ್ತ ಶಿಕ್ಷಕ, ಕಾಶಿ ಸಂತಾನ ಚ್ಯಾರಿಟೇಬಲ್ ಟ್ರಸ್ಟ್ ನ ಸ್ಥಾಪಕ
ವೈ .ಎಂ. ಶ್ರೀಧರ ರಾವ್ ಅವರಿಗೆ ಲಸಿಕೆ ನೀಡುವುದರೊಂದಿಗೆ ಲಸಿಕೆ ಹಾಕುವ ಕಾರ್ಯ ಆರಂಭವಾಯಿತು.
ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ
ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ಪ್ರಭು, ಎಲ್ಲೂರು ಪಂ. ಅಧ್ಯಕ್ಷ ಜಯಂತ ರಾವ್ ಮತ್ತು ಸದಸ್ಯರು, ಸರ್ವೋದಯ ಸಮುದಾಯ ಭವನದ ಅಧ್ಯಕ್ಷ ಕೆ.ಎಲ್ .ಕುಂಡಂತಾಯ, ಆದರ್ಶ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುದರ್ಶನ ವೈ.ಎಸ್, ಆದರ್ಶ ಯುವಕ ಸಂಘದ ಅಧ್ಯಕ್ಷ ಬರ್ಪಣಿ ಜೆ.ಸಂತೋಷ ಶೆಟ್ಟಿ , ಆದರ್ಶ ಮಹಿಳಾ ಸಂಘದ ಪ್ರೇಮ ಆರ್.ಸಾಲಿಯಾನ್ ಮತ್ತು ಸದಸ್ಯರು , ವೈದ್ಯಕೀಯ ಸಿಬಂದಿ ಉಪಸ್ಥಿತರಿದ್ದರು .