ಕಲ್ಯಾಣಪುರ ರೋಟರಿ ವತಿಯಿಂದ ಪುಸ್ತಕ ವಿತರಣೆ
Posted On:
25-08-2021 09:52AM
ಉಡುಪಿ : ರೋಟರಿ ಜಿಲ್ಲಾ ಯೋಜನೆ ವಿದ್ಯಾಸೇತು ಕಾರ್ಯಕ್ರಮದಡಿ ಕಲ್ಯಾಣಪುರ ರೋಟರಿ ವತಿಯಿಂದ ಟಿ.ಎಂ.ಎ. ಪೈ ಪ್ರೌಢ ಶಾಲೆ ಕಲ್ಯಾಣಪುರದ 41 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಈ ದಿನ ಟಿ.ಎಂ.ಎ. ಪೈ ಪ್ರೌಢ ಶಾಲೆ ಕಲ್ಯಾಣಪುರದಲ್ಲಿ ಶಾಲಾ ಇಂಟರಾಕ್ಟ್ ಕ್ಲಬ್ ನ ಸಹಯೋಗದಲ್ಲಿ ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಶೇಖರ್ ರವರು ಈ ಕಾರ್ಯವನ್ನು ಶ್ಲಾಘಿಸಿ ಶಿಕ್ಷಣದ ಬಗ್ಗೆ ರೋಟರಿ ಸಂಸ್ಥೆಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ಹೇಳಿದರು.
ವಲಯ ಸೇನಾನಿ ಬ್ರಾಯನ್ ಡಿಸೋಜ, ಅಧ್ಯಕ್ಷ ಶಂಭು ಶಂಕರ್, ಕಾರ್ಯದರ್ಶಿ ಪ್ರಕಾಶ್ ಕುಮಾರ್ ಮತ್ತು ಚಯರ್ ಮ್ಯಾನ್ ಲಿಯೋ ವಿಲಿಯಂ ಅಂದ್ರಾದೆರವರು ಸಮಯೋಚಿತವಾಗಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು. ನಿಕಟಪೂರ್ವ ಅಧ್ಯಕ್ಷ ಡೆಸ್ಮಂಡ್ ವಾಸ್, ಸದಸ್ಯರುಗಳಾದ ವಿದ್ಯಾಧರ್ ಕಿಣಿ, ರಾಮ ಪೂಜಾರಿ, ರಾಮಕೃಷ್ಣ ಆಚಾರ್ಯ ರವರು ಉಪಸ್ಥಿತರಿದ್ದರು.
ನಂತರ ಮಿಲಾಗ್ರಿಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಕಲ್ಯಾಣಪುರ, ಸರ್ಕಾರಿ ಪ್ರೌಢಶಾಲೆ ಕೆಮ್ಮಣ್ಣು ಹಾಗು ಕಾರ್ಮೆಲ್ ಪ್ರೌಢಶಾಲೆ ಕೆಮ್ಮಣ್ಣು ಶಾಲೆಗಳಿಗೆ ಭೇಟಿ ನೀಡಿ ಸಾಂಕೇತಿಕ ಕಾರ್ಯಕ್ರಮವನ್ನು ಜರುಗಿಸಿ ತಲಾ 65, 20, 20 ರಂತೆ ಒಟ್ಟು ರೂ.14,600 ವೆಚ್ಚದಲ್ಲಿ 146 ಪುಸ್ತಕಗಳನ್ನು ವಿತರಿಸಲಾಯಿತು.