ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ರೋಟರಿ ಶಂಕರಪುರ : ವಿದ್ಯಾಸೇತು ವಿದ್ಯಾ ಅಭಿಯಾನದ ಉದ್ಘಾಟನೆ

Posted On: 26-08-2021 03:24PM

ಕಾಪು : ರೋಟರಿ ಶಂಕರಪುರ ವತಿಯಿಂದ ವಿದ್ಯಾ ಸೇತು ವಿದ್ಯಾ ಅಭಿಯಾನದ ಉದ್ಘಾಟನೆಯನ್ನು ವಲಯ ಐದರ ಎಜುಕೇಶನ್ ಮತ್ತು ಲಿಟರಸಿ ಕೋಆರ್ಡಿನೆಟರ್ ಆಗಿರುವ ಶ್ರೀನಿವಾಸ್ ರಾವ್ ಮಾಡಿದರು.

ಸೈಂಟ್ ಜೋನ್ಸ್ ಕನ್ನಡ ಮಾಧ್ಯಮ ಶಾಲೆ ಶಂಕರಪುರದ ವಿದ್ಯಾರ್ಥಿಗಳಿಗೆ 52 ಪುಸ್ತಕ, ಇನ್ನಂಜೆ ಕನ್ನಡ ಮಧ್ಯಮ ಶಾಲೆಗೆ 42 ಪುಸ್ತಕ ಮತ್ತು ಪಾಂಗಾಳ ವಿದ್ಯಾವರ್ಧಕ ಶಾಲೆಗೆ 31 ಪುಸ್ತಕವನ್ನು ವಿತರಣೆ ಮಾಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಪ್ಲಾವಿಯಾ ಮೆನೆಜಸ್ ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ವಲಯ 5 ರ ವಲಯ ಸೇನಾನಿ ಅನಿಲ್ ಡೇಸಾ, ವಲಯ 5 ರ ಮಾಜಿ ಅಸಿಸ್ಟೆಂಟ್ ಗವರ್ನರ್ ಮತ್ತು ವಲಯ ತರಬೇತುದಾರರಾದ ನವೀನ್ ಅಮೀನ್, ಸೈ0ಟ್ ಜೋನ್ಸ್ ಶಂಕರಪುರದ ಮುಖ್ಯೋಪಾಧ್ಯಾಯರಾದ ಅಶ್ವಿನ್ ರೋಡ್ರಿಗಸ್, ನಿಕಟಪೂರ್ವ ಅಧ್ಯಕ್ಷರಾದ ವಿಕ್ಟರ್ ಮಾರ್ಟಿಸ್, ಸಂದೀಪ್ ಬಂಗೇರ, ಕಾರ್ಯದರ್ಶಿ ಮಾಲಿನಿ ಶೆಟ್ಟಿ, ಇನ್ನಂಜೆ ಶಾಲಾ ಮುಖ್ಯೋಪಾದ್ಯಾಯರಾದ ನಟರಾಜ್ ಉಪಾಧ್ಯಾಯ, ಪಾಂಗಾಳ ಶಾಲೆ ಮುಖ್ಯೋಪಾಧ್ಯಾಯರಾದ ಫ್ರಾನ್ಸಿಸ್, ಅಧ್ಯಾಪಕರು ಉಪಸ್ಥಿತರಿದ್ದರು.