ಈ ಬಾರಿ ಡಾಕ್೯ ಅಲೈಟ್ ವೇಷಧಾರಿಯಾಗಿ ಬರಲಿದ್ದಾರೆ ರವಿ ಕಟಪಾಡಿ - ನಮ್ಮ ಕೈಲಾದಷ್ಟು ಸಹಾಯ ಮಾಡಿ ಅನಾರೋಗ್ಯ ಪೀಡಿತ ಮಕ್ಕಳಿಗೆ ನೆರವಾಗೋಣ
Posted On:
29-08-2021 11:42PM
ಉಡುಪಿ : ಕೃಷ್ಣಜನ್ಮಾಷ್ಟಮಿಯೆಂದರೆ ಉಡುಪಿಯ ಜನತೆಗೆ ಎಲ್ಲಿಲ್ಲದ ಸಂತೋಷ. ಅಷ್ಟಮಿ ಎಂದಾಕ್ಷಣ ನಮಗೆ ನೆನಪು ಆಗುವುದು ವೇಷಧಾರಿಗಳು.
ವೇಷಧಾರಿ ಎಂದಾಗ ನಮಗೆ ಪ್ರಪ್ರಥಮವಾಗಿ ನೆನಪು ಆಗುವುದು ರವಿ ಕಟಪಾಡಿ. ಇವರು 9 ವರ್ಷದಿಂದ ವಿವಿಧ ರೀತಿಯ ವೇಷ ಧರಿಸಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ.
ಈ ವರ್ಷ ಡಾರ್ಕ್ ಅಲೈಟ್ ಎಂಬ ವಿಭಿನ್ನ ರೀತಿಯ ವೇಷ ಧರಿಸಿ ಮಲ್ಪೆ ಹಾಗೂ ಉಡುಪಿಯ ಆಸುಪಾಸಿಗೆ 30 ಹಾಗೂ 31 ರಂದು ಬರಲಿದ್ದಾರೆ.
ಈಗ ಹಣ ಕೊಡಲು ಸ್ವಲ್ಪ ಕಷ್ಟ ಆದರೂ ನಾವು ನಮ್ಮ ಕೈಲಾದಷ್ಟು ಸಹಾಯ ಮಾಡೋಣ. ಅನಗತ್ಯ ವಸ್ತುಗಳಿಗೆ ಹಣ ಖರ್ಚು ಮಾಡುವ ಬದಲು ಇಂತವರಿಗೆ ಸಹಾಯ ಮಾಡೋಣ.