ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ರಾಘವೇಂದ್ರ ಪ್ರಭು ಕವಾ೯ಲುರವರಿಗೆ ಸಮಾಜ ಸೇವಾ ರತ್ನ ಪುರಸ್ಕಾರ

Posted On: 31-08-2021 09:39AM

ಉಡುಪಿ : ಜನ್ಮಭೂಮಿ ಫೌಂಡೇಶನ್ (ರಿ.) ಬೆಂಗಳೂರು ಇದರ ವತಿಯಿಂದ ಕರೋನಾ ವಾರಿಯಸ್೯ಗಳಿಗೆ ಆ.29ರಂದು ಸ್ಯಾಂಕಟನ್ ಹೋಟೆಲ್ ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕರೋನಾ ಸಂದಭ೯ದಲ್ಲಿ ಉತ್ತಮ ಸೇವೆ ಸಲ್ಲಿಸಿದ ರಾಘವೇಂದ್ರ ಪ್ರಭು, ಕವಾ೯ಲುರವರನ್ನು ಸಮಾಜ ಸೇವಾ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದಭ೯ದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾII ಕುಂ.ವೀರಭದ್ರಪ್ಪ, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಶಿವಕುಮಾರ್, ಚಲನಚಿತ್ರ ನಟರಾದ ಭೂವನ್ ಪೊನಪ್ಪ, ಪೂಜಾ ರಮೇಶ್, ಗ್ರಂಥಾಲಯ ಇಲಾಖೆಯ ನಿದೇ೯ಶಕ ಡಾII ಸತೀಶ್ ಕುಮಾರ್ ಹೊಸಮನಿ, ಸಹಾಯಕ ಪೊಲೀಸ್ ಕಮಿಷನರ್ ರಮೇಶ್, ವಿಶ್ವಕಮ೯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ್, ಮಾರುತಿ ಬಡಿಗೇರ್ ಮುಂತಾದವರು ಉಪಸ್ಥಿತರಿದ್ದರು.