ಮಂಗಳೂರು : ಸಾನ್ವಿ ಕ್ರಿಯೆಷನ್ ಅರ್ಪಿಸುವ "ಮಾದುಕೊಡಿದ ಉಳ್ಳಾಯೇ" ತುಳು ಭಕ್ತಿ ಹಾಡು ಮಾದುಕೋಡಿ ಕೊರಗಜ್ಜ ಸಾನಿಧ್ಯದಲ್ಲಿ ಶ್ರೀ ವಿಜಯ ಸುವರ್ಣ ಗುರುಗಳ ದಿವ್ಯ ಹಸ್ತದಲ್ಲಿ ಬಿಡುಗಡೆಗೊಂಡಿತು.
ಈ ಸಂದರ್ಭದಲ್ಲಿ ತುಳುನಾಡಿನ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಪುಟ್ಟ ಬಾಲ ಗಾಯಕಿ ಮಾದುಕೋಡಿ ಕ್ಷೇತ್ರದ ಹಾಡನ್ನು ಹಾಡಿ ಅಭಿನಯಿಸಿರುವ ಸಾನ್ವಿ ಭಟ್ ಚಿತ್ರಾಪುರ ಇವರನ್ನು ಸನ್ಮಾನಿಸಲಾಯಿತು. ಜೊತೆಗೆ ಇಡೀ ತಂಡವನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗಾಯಕಿ ಸಾನ್ವಿ ಭಟ್ ಚಿತ್ರಾಪುರ, ಕ್ಷೇತ್ರದ ಗುರುಗಳಾದ ವಿಜಯ ಸುವರ್ಣ, ನೋವೆಲ್ ಡಿಸೋಜಾ, ಪ್ರದೀಪ್ ಕುಕ್ಕಿಪಾಡಿ, ಕಲಾಂಜಲಿ ಕ್ರಿಯೆಷನ್ ರಾಜೇಶ್ ಭಂಡಾರಿ, ಸಾಹಿತಿ ಜಿ. ಎಸ್ ಗುರುಪುರ, ರಾಜೇಶ್ ಭಟ್ ಚಿತ್ರಾಪುರ, ತ್ರಿಷಾಲ್ ಶೆಟ್ಟಿ, ಜಿತೇಶ್ ಸಿದ್ದಕಟ್ಟೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಈ ಹಾಡು ಈಗಾಗಲೇ ಸಾನ್ವಿ ಕ್ರಿಯೆಷನ್ ಯು ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿರುತ್ತದೆ.