ಕೇಂಜ ಗರಡಿ ಬ್ರಹ್ಮ ಬೈದೇರುಗಳ ಪೂಜಾ ಪೂಜಾರ್ಮೆಯನ್ನು ನಿರ್ವಹಿಸುತ್ತಿದ್ದ ಸುರನಾಥ ಅಮೀನ್ ( ಬಾಬಣ್ಣ) ನಿಧನ
Posted On:
01-06-2022 08:24PM
ಕಾಪು : ಗರಡಿಗಳ ಸಾಲಿನಲ್ಲಿ ಕೆಮ್ಮಲೆಗೆ ಸರಿ ಸಮಾನವಾದ ಕೇಂಜ ಮಲೆಯಲ್ಲಿ ವಿರಾಜಮಾನರಾದ ಬ್ರಹ್ಮ ಬೈದೇರುಗಳ ಪೂಜಾ ಪೂಜಾರ್ಮೆಯನ್ನು ನಿರ್ವಹಿಸುತ್ತಿದ್ದ ಸುರನಾಥ ಅಮೀನರು ಮೇ31ರಂದು ಅಲ್ಪ ಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು.
ಪ್ರೀತಿಯಿಂದ ಬಾಬಣ್ಣ ಎಂದು ಕರೆಯಲ್ಪಡುತ್ತಿದ್ದ ಅವರು ಮೂಲ ಸಂಪ್ರದಾಯಕ್ಕೆ ಧಕ್ಕೆ ಬರದ ರೀತಿ ಆರಾಧನಾ ಪ್ರಕ್ರಿಯೆಯನ್ನು ಸುಮಾರು 12 ವರ್ಷಗಳ ಕಾಲ ಶ್ರದ್ದೆಯಿಂದ, ಪ್ರಾಮಾಣಿಕವಾಗಿ ಆತ್ಮ ಸಮರ್ಪಣಾ ಮನೋಭಾವದಿಂದ ನಿರ್ವಹಿಸಿದ್ದರು.
ಮುದರಂಗಡಿ ಬಿಲ್ಲವ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.