ಮಟ್ಟು : ಮೀನುಗಾರಿಕೆಯ ಸಂದರ್ಭ ಎದೆ ನೋವು ವ್ಯಕ್ತಿ ಸಾವು
Posted On:
02-07-2022 06:06PM
ಕಾಪು : ಅಣ್ಣ ಮತ್ತು ತಮ್ಮ ಮಟ್ಟುಗ್ರಾಮದ ಪಾಪನಾಶಿನಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದು ಅಣ್ಣನು ಮೀನು ಹಿಡಿಯುವ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡು ಮೃತಪಟ್ಟ ಘಟನೆ ಜುಲೈ 1ರಂದು ನಡೆದಿದೆ.
ಮಟ್ಟು ಗ್ರಾಮದ ದಿನೇಶ್ ಎಂಬುವವರು ತನ್ನ ಅಣ್ಣ ಗಣೇಶ್ (45)ರೊಂದಿಗೆ ಎಂದಿನಂತೆ ಮೀನು ಹಿಡಿಯಲು ಬೆಳಿಗ್ಗೆ 10 ಗಂಟೆಗೆ ಮಟ್ಟುಗ್ರಾಮದ ಪಾಪನಾಶಿನಿ ನದಿಗೆ ದೋಣಿಯಲ್ಲಿ ಹೋಗಿದ್ದು, ಮೀನು ಹಿಡಿಯುತ್ತಿರುವ ಸಂದರ್ಭ ಗಣೇಶ್ ಗೆ ಎದೆ ನೋವು ಕಾಣಿಸಿಕೊಂಡು ದೋಣಿಯಿಂದ ನೀರಿಗೆ ಬಿದ್ದಿದ್ದು, ಆ ಕೂಡಲೇ ದಿನೇಶ್ ಅಲ್ಲಿಯೇ ಬೇರೆ ದೋಣಿಯಲ್ಲಿ ಮೀನು ಹಿಡಿಯುತ್ತಿದ್ದವರನ್ನು ಕೂಗಿ ಕರೆದು ಅವರ ಸಹಾಯದಿಂದ ನೀರಿಗೆ ಬಿದ್ದಿದ್ದ ಗಣೇಶ್ರವರನ್ನು ಮೇಲಕ್ಕೆ ಎತ್ತಿ ದಡಕ್ಕೆ ತಂದಾಗ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಅವರನ್ನು ಕೂಡಲೇ ಮಟ್ಟುವಿನ ಕ್ಲಿನಿಕ್ಗೆ ಕರೆದುಕೊಂಡು ಹೋಗಲಾಗಿತ್ತು.
ಅಲ್ಲಿಂದ ಉಡುಪಿಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಮೃತಪಟ್ಟಿರುವ ಬಗ್ಗೆ ತಿಳಿಸಿರುತ್ತಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.