ಉಡುಪಿ : ಹೊಸ ಬೆಳಕು ಆಶ್ರಮ ಮಣಿಪಾಲ ಇವರ ವಿನಂತಿಯ ಮೇರೆಗೆ,ಕಾರವಾರ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ ತಂಗುದಾಣದಲ್ಲಿ ಅಸ್ವಸ್ಥರಾಗಿದ್ದ ಸುಮಾರು ಅರವತ್ತು ವರ್ಷ ಪ್ರಾಯದ ಒಂಪ್ರಕಾಶ್ ಎಂಬುವವರನ್ನು ಈಶ್ವರ್ ಮಲ್ಪೆರವರು ಸತ್ಯದ ತುಳುವೆರ್ (ರಿ) ಉಡುಪಿ- ಮಂಗಳೂರು ಸಂಸ್ಥೆಯ ಸಂಸ್ಥಾಪಕರಾಗಿರುವ ಪ್ರವೀಣ್ ಕುರ್ಕಾಲುರವರ ಹಾಗು ವಿಜಯ್ ಕೋಟ್ಯಾನ್ ಜೊತೆಗೆ, ಪ್ರಥಮ ಚಿಕಿತ್ಸೆ ಕೊಡಿಸಿ ಮಣಿಪಾಲದ ಹೊಸಬೆಳಕು ಆಶ್ರಮಕ್ಕೆ ಸೇರಿಸಿದರು.
ಈ ಸಂದರ್ಭದಲ್ಲಿ
ಹೊಸ ಬೆಳಕು ಆಶ್ರಮದ ಮುಖ್ಯಸ್ಥರಾಗಿರುವ ಪೂರ್ಣಿಮ, ವಿನಯಚಂದ್ರ, ಗೌರೀಶ್, ಕಾರವಾರ ಪೊಲೀಸ್ ಠಾಣಾಧಿಕಾರಿ ಹಾಗೂ ಮಲ್ಪೆ ಪೊಲೀಸ್ ಠಾಣಾಧಿಕಾರಿ ಶಕ್ತಿವೇಲು ಸಹಕರಿಸಿದ್ದರು.