ಕಾಪು : ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ನಡಿಮನೆ ದೇವರಾಜ ರಾವ್ ಅವರು ಪುನರಾಯ್ಕೆಗೊಂಡಿದ್ದು ದೇಗುಲದ ಆಡಳಿತಾಧಿಕಾರಿ ಮಮತಾ ವೈ. ಶೆಟ್ಟಿ ಅವರು ಜುಲೈ 29 ರಂದು ಅಧಿಕಾರ ಹಸ್ತಾಂತರಿಸಿದರು.
ದೇಗುಲದ ಪವಿತ್ರಪಾಣಿ ಕೆ.ಎಲ್. ಕುಂಡಂತಾಯ ಮತ್ತು ಅರ್ಚಕ ವಿಶ್ವನಾಥ ಉಡುಪ ಅವರ ನೇತೃತ್ವದಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಿ, ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಸಲಾಯಿತು.
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸಂಜೀವ ಶೆಟ್ಟಿ ಪಣಿಯೂರು, ಲೋಕೇಶ್ ಶೆಟ್ಟಿ ಬೆಳಪುಗುತ್ತು, ಬಾಲಕೃಷ್ಣ ಪಣಿಯೂರು, ಗ್ರಾಮದ ಪ್ರಮುಖರಾದ ಸತೀಶ್ ಕುಂಡಂತಾಯ, ಪ್ರಕಾಶ್ ರಾವ್ ಪಠೇಲ್, ಶ್ರೀಧರ ಮಂಜಿತ್ತಾಯ, ಸುದರ್ಶನ್ ವೈ.ಎಸ್., ಮನೋಹರ್ ರಾವ್ ಪಣಿಯೂರು, ಸತೀಶ್ ಶೆಟ್ಟಿ ಗುಡ್ಡೆಚ್ಚಿ, ದಿನೇಶ್ ಕುಂಜೂರು, ರಾಕೇಶ್ ಕುಂಜೂರು, ಶ್ರೀ ದುರ್ಗಾ ಮಿತ್ರವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ದೇವಸ್ಥಾನದ ಪ್ರಬಂಧಕ ರಾಘವೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.