ಉಡುಪಿ : ಮುನಿಯಲ್ ಆಯುರ್ವೇದ ಮೆಡಿಕಲ್ ಸೈನ್ಸ್ ಮಣಿಪಾಲ ನ ಎನ್ ಎಸ್ ಎಸ್ ಯುನಿಟಿನಿಂದ ಇಂದು ಸರ್ಕಾರದ ಅಭಿಯಾನದ ಹರ್ ಗರ್ ತಿರಂಗ ಪ್ರಯುಕ್ತ ಮುನಿಯಲ್ ಕಾಲೇಜಿನಲ್ಲಿ ಸರ್ಕಾರದಿಂದ ಬಂದ ರಾಷ್ಟ್ರ ಧ್ವಜವನ್ನು ಎಲ್ಲರಿಗೂ ವಿತರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುನಿಯಲ್ ಕಾಲೇಜಿನ ಆಡಳಿತ ಅಧಿಕಾರಿಯಾದ ಯೋಗೀಶ್ ಶೆಟ್ಟಿ, ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಭಟ್, ಡಾ. ಸುದೀಪ್, ಡಾ. ರವಿಶಂಕರ ಶೇನೋಯ್, ಡಾ. ಗುರುರಾಜ್ ತಂತ್ರಿ ಹಾಗೂ ಎನ್ ಎಸ್ ಎಸ್ ವಿದ್ಯಾರ್ಥಿ ಪ್ರಮುಖರಾದ ಶಾರ್ವರಿ ಅಡಿಗ ಮತ್ತು ಹೃತಿಕ್ ಗೋಳಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.