ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಟಪಾಡಿ : ಚಿಣ್ಣರ ಬಾಲವನ ನವೀಕರಣದ ಉದ್ಘಾಟನೆ

Posted On: 15-08-2022 05:48PM

ಕಟಪಾಡಿ : 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಏಣಗುಡ್ಡೆ ಅಗ್ರಹಾರದ ಗ್ರಾಮದ ಮಕ್ಕಳಿಗೆ ಅನುಕೂಲವಾಗುವಂತೆ ಊರ ದಾನಿಗಳ ಸಹಾಯದಿಂದ ನಿರ್ಮಾಣಗೊಂಡಿದ್ದ ಮಕ್ಕಳ ಬಾಲವನದ ನವೀಕರಣದ ಉದ್ಘಾಟನೆಯು ಆಗಸ್ಟ್ 15 ರಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಗ್ರಹಾರ ದ ಬಳಿಯಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಹಿಂದೂ ಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಇದರ ಅಧ್ಯಕ್ಷರಾದ ದಿಲೀಪ್ ಕುಮಾರ್, ಕಾರ್ಯದರ್ಶಿ ಮಂಜುನಾಥ್, ಕೋಶಾಧಿಕಾರಿ ಅರ್ಜುನ್, ತಾಲೂಕು ಪಂಚಾಯತ್ ಸದಸ್ಯರಾದ ನಾಗೇಶ್ ಹಾಗೂ ಕಾರ್ಯಕರ್ತರಾದ ದೀಪಕ್ ದುರ್ಗಾನಗರ, ಸಂತೋಷ್.ಎನ್.ಎಸ್, ಕಟಪಾಡಿ ಗಣೇಶ್ ಉಪಸ್ಥಿತರಿದ್ದರು.