ಪಡುಬಿದ್ರಿ : ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ನಿಟ್ಟಿನಲ್ಲಿ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನೂತನವಾಗಿ ಪಡುಬಿದ್ರಿ ಹೃದಯಭಾಗದಲ್ಲಿ ಧ್ವಜಸ್ತಂಭ ಉದ್ಘಾಟನಾ ಕಾರ್ಯಕ್ರಮ ಹಾಗೂ 76ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಜರಗಿತು.
ಮಾಜಿ ಸಚಿವರು ಹಾಗೂ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ ಅವರು ಧ್ವಜಸ್ತಂಭವನ್ನು ಉದ್ಘಾಟಿಸಿ ಹಾಗೂ ಧ್ವಜಾರೋಹಣವನ್ನು ನೆರವೇರಿಸಿ ನಾಡಿನ ಸಮಸ್ತ ಜನತೆಗೆ ಶುಭ ಹಾರೈಸಿದರು. ಶಾಂತಿ ಸಹಬಾಳ್ವೆ ಬದುಕಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಕಾಂಗ್ರೆಸ್ಸಿನ ಅಧ್ಯಕ್ಷರಾದ ಕರುಣಾಕರ್ ಎಂ ಪೂಜಾರಿ, ನವೀನ ಚಂದ್ರ ಜೆ ಶೆಟ್ಟಿ, ನವೀನ್ ಎನ್ ಶೆಟ್ಟಿ, ಹರೀಶ್ ಶೆಟ್ಟಿ ಪಾದೆಬೆಟ್ಟು, ಸಂತೋಷ್ ಶೆಟ್ಟಿ, ಎಂ ಎಸ್ ಶಾಫಿ, ಜ್ಯೋತಿ ಮೆನನ್, ಗಣೇಶ್ ಕೋಟ್ಯಾನ್, ಅಬ್ದುರ್ರಹ್ಮಾನ್ ಕಣ್ಣಂಗಾರ್, ರಮೀಝ್ ಹುಸೇನ್, ಹಸನ್ ಬಾವ, ಅಶೋಕ್ ಸಾಲಿಯಾನ್, ದಿನೇಶ್ ಪಲಿಮಾರ್, ದಿನೇಶ್ ಕಂಚಿನಡ್ಕ, ಬುಡನ್ ಸಾಹೇಬ್, ಎಂ.ಎಸ್ ನಿಜಾಮ್, ಕೀರ್ತಿ ಕುಮಾರ್, ಎಂ ಎಸ್ ಮನ್ಸೂರ್ ಮತ್ತಿತರರು ಉಪಸ್ಥಿತರಿದ್ದರು.