ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಆಗಸ್ಟ್ 19 : ಜೆಸಿಐ ಕಾಪುವಿನಿಂದ ಮುದ್ದು ಕೃಷ್ಣ ‌ವೇಷ ಸ್ಪರ್ಧೆ

Posted On: 16-08-2022 05:12PM

ಕಾಪು : ಜೆಸಿಐ ಕಾಪು ವಲಯದಿಂದ ಜೆಸಿ ಜಗದೀಶ್ ಆಚಾರ್ಯ ಇವರ ಸ್ಮರಣಾರ್ಥ ಕಾಪು ಜಯಲಕ್ಷ್ಮೀ ಜ್ಯುವೆಲ್ಲಸ್೯ ಪ್ರಾಯೋಜಕತ್ವದಲ್ಲಿ 3 ವರ್ಷಕ್ಕಿಂತ ಕೆಳಗಿನ, ಅಂಗನವಾಡಿ ಮತ್ತು ಎಲ್ ಕೆ ಜಿ, ಯು ಕೆ ಜಿ, 1 ನೇ ಮತ್ತು 2 ನೇ ತರಗತಿಯ ಮಕ್ಕಳಿಗಾಗಿ ಆಗಸ್ಟ್ 19 ರಂದು ಕಾಪುವಿನ ಲಕ್ಷ್ಮೀ ಜನಾರ್ದನ ಸಭಾಂಗಣದಲ್ಲಿ ಬೆಳಗ್ಗೆ 9.30 ಕ್ಕೆ ಮುದ್ದು ಕೃಷ್ಣ ‌ವೇಷ ಸ್ಪರ್ಧೆ ಜರಗಲಿದೆ.

ಪ್ರತೀ ಸ್ಪರ್ಧೆಗೆ ವೇದಿಕೆಯಲ್ಲಿ ಒಂದು ನಿಮಿಷ ಅವಕಾಶ, ವೇಷ ಮತ್ತು ಭಾವಾಭಿನಯನಕ್ಕೆ ಪ್ರಾಧಾನ್ಯತೆ, ಹಿನ್ನಲೆ ಪರಿಕರಗಳನ್ನು ಅಗತ್ಯವಿದ್ದಲ್ಲಿ ಬಳಸಬಹುದು (ಅಂಕದ ಪ್ರಾಧಾನ್ಯತೆಯಿರುವುದಿಲ್ಲ), ಸ್ಪರ್ಧಾಳು ಮಕ್ಕಳ ಹೆಸರನ್ನು ಒಂದು ದಿನ ಮುಂಚಿತವಾಗಿ ಸಂಘಟಕರಲ್ಲಿ ನೋಂದಾಯಿಸ ತಕ್ಕದ್ದು, ವಿಜೇತರಿಗೆ ಅಂದೇ ಬಹುಮಾನಗಳನ್ನು ನೀಡಲಾಗುವುದು, ಸಂಘಟಕರ ತೀರ್ಮಾನವೇ ಅಂತಿಮ ಎಂದು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.