ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶಿಕ್ಷಕಿ ಸುಷ್ಮಿತಾ ಗಿರಿರಾಜ್ ಕೈ‌ಚಳಕದಿ ನೇಜಿಯಲ್ಲಿ ಮೂಡಿದ ಭಾರತದ ಭೂಪಟ

Posted On: 16-08-2022 11:48PM

ಉದ್ಯಾವರ : ಇಲ್ಲಿನ ಸ್ಮಾರ್ಟ್ ಇಂಡಿಯನ್ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ನಲ್ಲಿ ಶಿಕ್ಷಕಿ, ಕಲಾವಿದೆ ಸುಷ್ಮಿತಾ ಗಿರಿರಾಜ್ ಅವರು ಭಾರತದ ಭೂಪಟವನ್ನು ಭತ್ತದ ಸಸಿ(ನೇಜಿ)ಯಲ್ಲಿ ಬೆಳೆಸಿ ಗಮನ ಸೆಳೆದಿದ್ದಾರೆ.

ಕೃಷಿಯ ಬಗೆಗೆ ಆಸಕ್ತಿ ಕುಂಠಿತವಾಗುತ್ತಿರುವ ಕಾಲದಲ್ಲಿ ವಿದ್ಯಾರ್ಥಿಗಳಲ್ಲಿ ಕೃಷಿ ಪ್ರೇಮವನ್ನು ಸೆಳೆಯುವ ನಿಟ್ಟಿನಲ್ಲಿ ತಿರಂಗ ಸಹಿತ ಭಾರತವನ್ನು ರಚಿಸಿ ಸ್ವಾತಂತ್ರ್ಯ 75ರ ಅಮೃತ ಮಹೋತ್ಸವವನ್ನು ಸಂಭ್ರಮಿಸಲಾಗಿದೆ.

ಸದಿಯ ಸಾಹುಕಾರ್ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಮಹೇಶ್‌ ಉದ್ಯಾವರ, ಮುಖ್ಯ ಶಿಕ್ಷಕಿ ಅರ್ಚನಾ, ಆಡಳಿತಾಧಿಕಾರಿಗಳಾದ ಪ್ರತಿಭಾ ಕೋಟ್ಯಾನ್‌, ಅಪ್ಸರೀ ರಫಿಕ್ ಖಾನ್, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರಿಂದ ಮೆಚ್ಚುಗೆ ಪಾತ್ರವಾಗಿದೆ.