ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬಂಟಕಲ್ಲು : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕದಿರು ಹಬ್ಬ

Posted On: 09-09-2022 10:32AM

ಬಂಟಕಲ್ಲು : ಅನಂತ ಚತುರ್ದಶಿಯ ಪುಣ್ಯದಿನವಾದ ಇಂದು ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕದಿರು ಹಬ್ಬವನ್ನು ಆಚರಿಸಲಾಯಿತು . ಶಿರ್ವ ಅನಂತರಾಯ ಶೆಣೈರವರ ಗದ್ದೆಯಿಂದ ಕದಿರನ್ನು ತೆಗೆದು ಬಂಟಕಲ್ಲು ದೇವಳದ ಅರ್ಚಕರಾದ ವೇದಮೂರ್ತಿ ಸಂದೇಶ್ ಭಟ್ ರವರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಿಸಿ ಬಂಟಕಲ್ಲು ದೇವಸ್ಥಾನಕ್ಕೆ ಕದಿರನ್ನು ಶೋಭಾಯಾತ್ರೆಯಮೂಲಕ ತರಲಾಯಿತು. ದೇವಸ್ಥಾನದಲ್ಲಿ ಕದಿರು ಪೂಜೆಯನ್ನು ನೆರವೇರಿಸಿ ಭಕ್ತಾಧಿಗಳಗೆ ಕದಿರನ್ನು ವಿತರಿಸಲಾಯಿತು.

ದೇವಸ್ಥಾನದ ಆಡಳಿತ ಮಂಡಳಿಯ ಆಡಳಿತ ಮೊಕ್ತೇಸರರಾದ ಶಶಿಧರ ವಾಗ್ಲೆ, ಅಧ್ಯಕ್ಷರಾದ ಜಯರಾಮ ಪ್ರಭು ಉಪಾಧ್ಯಕ್ಷರಾರ ಉಮೇಶ್ ಪ್ರಭು, ಆಡಳಿತ ಮಂಡಳಿಯ ಸುರೇಂದ್ರ ನಾಯಕ್, ಸಂತೋಷ್ ನಾಯಕ್, ರಾ ಸಾ ಯುವ ವೃಂದದ ಗೌರವಾಧ್ಯಕ್ಷ ಕೆ.ಆರ್ ಪಾಟ್ಕರ್, ಕಾರ್ಯದರ್ಶಿ ಅನಂತರಾಮ ವಾಗ್ಲೆ, ದೇವಸ್ಥಾನದ ಕಛೇರಿ ವ್ಯವಸ್ಥಾಪಕ ಕೃಷ್ಣಮೂರ್ತಿ ಪಾಟ್ಕರ್, ಅರ್ಚಕ ಸುಧೀಂದ್ರ ಭಟ್, ನರೇಶ್ ಭಟ್, ನಿವೃತ್ತ ಶಿಕ್ಷಕ ಪುಂಡಲೀಕ ಮರಾಠೆ, ವಿರೇಂದ್ರ ಪಾಟ್ಕರ್, ಯೋಗಿಶ್ ಸಾಲ್ವಣ್ಕರ್,ರವೀಂದ್ರ ನಾಯಕ್, ಅಚ್ಚುತ ನಾಯಕ್, ದಯಾನಂದ ಪಾಟ್ಕರ್ ಮುಂತಾದವರು ಉಪಸ್ಥಿತರಿದ್ದರು.