ಕಾಪು : ಇಲ್ಲಿನ ಲಕ್ಷ್ಮಿಜನಾರ್ಧನ ದೇವಳಕ್ಕೆ ಕನ್ನಡ ಚಲನಚಿತ್ರ ನಟ ಗೋಲ್ಡನ್ ಸ್ಟಾರ್ ಗಣೇಶ್ ಭೇಟಿ ನಿಡಿದರು.
ದೇವಳದ ಪ್ರಧಾನ ಅರ್ಚಕರಾದ ಜನಾರ್ಧನ ತಂತ್ರಿಯವರು ಗಣೇಶರನ್ನು ಸನ್ಮಾನಿಸಿ ಶ್ರೀ ದೇವರ ಪ್ರಸಾದ ವಿತರಿಸಿದರು.
ಈ ಸಂದರ್ಭ ಪ್ರಕಾಶ್ ಅಮ್ಮಣ್ಣಾಯ, ದೇವಳದ ಸಿಬ್ಬಂದಿ ದಿವಾಕರ್, ಲಕ್ಷ್ಮೀಕಾಂತ್, ರಾಧಾಕೃಷ್ಣ ಕಲ್ಲೂರಾಯ, ಕಾಪು ಪುರಸಭಾ ಸದಸ್ಯ ಅನಿಲ್ ಮತ್ತಿತರರು ಉಪಸ್ಥಿತರಿದ್ದರು.