ಉಡುಪಿ : ಇಲ್ಲಿನ ಶಾಸಕರಾದ ಕೆ.ರಘುಪತಿ ಭಟ್ ಮತ್ತು ಮಹೇಶ್ ಠಾಕೂರ್ ರವರ ವಿಶೇಷ ಪ್ರಯತ್ನದಿಂದ ಜಿಲ್ಲಾಧಿಕಾರಿಯವರು ಉಡುಪಿ ರಿಕ್ಷಾ ಚಾಲಕರ ಮಾಲಕರ ಸಂಘಗಳ ಒಕ್ಕೂಟ(ರಿ.) ಉಡುಪಿ ಇವರ ಮನವಿ ಪುರಸ್ಕರಿಸಿ ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲ ರಿಕ್ಷಾಗಳ ದರ ಪರಿಷ್ಕರಣೆ ಮಾಡಿ ಪ್ರತಿ ಕಿ.ಮೀ 20ರೂಪಾಯಿಗಳು ಕನಿಷ್ಠ 40ರೂ. ನಂತೆ ಮಾಡಿದ್ದಾರೆ.
ಮನವಿ ಪುರಸ್ಕರಿಸಿದಕ್ಕೆ ಉಡುಪಿ ಅಧ್ಯಕ್ಷರು, ಚಾಲಕರು ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ಹಾಗೂ ಜಿಲ್ಲಾ ಒಕ್ಕೂಟವು ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದೆ.