ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕುತ್ಯಾರು ಗುತ್ತು ಮಂಡೇಡಿ ಕೆ ಸದಾನಂದ ಶೆಟ್ಟಿ ನಿಧನ

Posted On: 27-09-2022 07:21PM

ಕಾಪು : ಇನ್ನಂಜೆ ಗ್ರಾಮದ ಹಿರಿಯರಾದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮಾರ್ಗದರ್ಶನ ನೀಡುತಿದ್ದ ಕುತ್ಯಾರು ಗುತ್ತು ಮಂಡೇಡಿ ಕೆ ಸದಾನಂದ ಶೆಟ್ಟಿ (87) ಯವರು ಇಂದು ಬೆಳಿಗ್ಗೆ ನಿಧಾನರಾಗಿದ್ದಾರೆ.

ಪ್ರಗತಿಪರ ಕೃಷಿಕರಾಗಿ, ಉಡುಪಿ ಕೃಷಿ ಸಂಘದ ಅಧ್ಯಕ್ಷರಾಗಿ, ವಿಶ್ವಹಿಂದೂ ಪರಿಷತ್ ಕಾಪು ಪ್ರಖಂಡರಾಗಿ ಸೇವೆ ಸಲ್ಲಿಸಿರುತ್ತಾರೆ.