ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಕಾಂಗ್ರೆಸ್ ಹೇಳಿಕೆಗೆ ಸೆಡ್ಡು ಹೊಡೆದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯೊಂದಿಗೆ ಸೆಲ್ಫಿಗೆ ಮುಗಿಬಿದ್ದ ಬಿಜೆಪಿ ಕಾರ್ಯಕರ್ತರು

Posted On: 30-09-2022 07:26PM

ಕಾಪು : ಕೇಂದ್ರ ಸಚಿವೆ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಪುವಿಗೆ ಶುಕ್ರವಾರ ಆಗಮಿಸಿದ ಸಂದರ್ಭ ಬಿಜೆಪಿ ಕಾರ್ಯಕರ್ತರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ಎರಡು ದಿನದ ಹಿಂದೆ ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರು ಶೋಭಾ ಕರಂದ್ಲಾಜೆ ಉಡುಪಿಗೆ ಬರುತ್ತಿಲ್ಲ ಅವರು ಎರಡು ದಿನಗಳೊಳಗೆ ಬಂದರೆ ಅವರೊಂದಿಗೆ ಸೆಲ್ಫಿ ಕಳುಹಿಸಿದವರಿಗೆ ಬಹುಮಾನ ನೀಡುವ ಹೇಳಿಕೆ ನೀಡಿದ್ದರು.

ಆ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ಮಿಥುನ್ ಹೇಳಿಕೆಗೆ ಸೆಡ್ಡು ಹೊಡೆಯಲು ಸೆಲ್ಫಿ ತೆಗೆದುಕೊಂಡರು.