ಕಾಪು : ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಮಂಗಳವಾರ ಚಂಡಿಕಾಯಾಗದ ಪೂರ್ಣಾಹುತಿ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.
ಬೆಳಿಗ್ಗೆ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಮಧ್ಯಾಹ್ನ ಚಂಡಿಕಾಯಾಗದ ಪೂರ್ಣಾಹುತಿಯ ನಂತರ ಅನ್ನಸಂತರ್ಪಣೆ ಸಂಜೆ ಶ್ರೀ ದೇವಿಯ ದರ್ಶನ ಜೊತೆಗೆ ಕೆಂಡ ಸ್ನಾನವು ಜರಗಿತು. ತದನಂತರ ಪ್ರಸಾದ ವಿತರಣೆಯು ಜರಗಿತು.
ಈ ಸಂದರ್ಭ ನಮ್ಮ ಕಾಪು ವೆಬ್ ನ್ಯೂಸ್ ನೊಂದಿಗೆ ಮಾತನಾಡಿದ ಲಕ್ಷ್ಮೀಜನಾರ್ಧನ ದೇವಳದ ವಿಶೇಷ ತಂತ್ರಿವರ್ಯ ಶ್ರೀಶ ತಂತ್ರಿಯವರು, ಶರನ್ನವರಾತ್ರಿ ಕಾಲದಲ್ಲಿ ದೇವಳದಲ್ಲಿ ನಿತ್ಯ ಬೆಳಗ್ಗೆ ಶಕ್ತಿ ಆರಾಧನೆ, ಗಣಯಾಗ, ಕಲ್ಪೋಕ್ತ ಪೂಜೆ, ಸಾಯಂಕಾಲ ದುರ್ಗಾಪೂಜೆ ನೆರವೇರುತ್ತಿದೆ. ಒಂದನೆಯ ಮಂಗಳವಾರ ಲಕ್ಷ್ಮಿ ಪ್ರವೇಶ ಎರಡನೆಯ ಮಂಗಳವಾರ ಚಂಡಿಕಾಯಾಗದ ಪೂರ್ಣಾಹುತಿ ಅನ್ನಸಂತರ್ಪಣೆ ನಡೆದಿರುತ್ತದೆ.
ಹಿಂದಿನಿಂದ ಬಂದ ಪದ್ಧತಿಯಂತೆ ಎಲ್ಲಾ ಸೇವೆಗಳ ಸಸೂತ್ರವಾಗಿ ನಡೆಯುತ್ತಿದೆ. ಚಂಡಿಕಾಯಾಗ ಪೂರ್ಣಾಹುತಿಯ ಈಗಾಗಲೆ ನಡೆದಿದ್ದು ಭಕ್ತರ ಕಷ್ಟಕಾರ್ಪಣ್ಯಗಳನ್ನು ದೇವಿ ದೂರ ಮಾಡುತ್ತಾಳೆ. ಪ್ರತಿ ಮಂಗಳವಾರ ಸನ್ನಿಧಾನದಲ್ಲಿ ಪೂಜೆ ನಡೆಯುತ್ತದೆ. ಶರತ್ಕಾಲದ ಅಶ್ವಿಜ ಮಾಸದಲ್ಲಿ ನಡೆಯುವ ಹತ್ತು ದಿನದ ಉತ್ಸವದಲ್ಲಿ ದೇವಿಯನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳನ್ನು ದೇವಿ ಈಡೇರಿಸುತ್ತಾಳೆ ಇದು ಶಾಸ್ತ್ರ ನಿಯಮವಾಗಿದೆ ಎಂದರು.