ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಚ್ಚಿಲ : ಶೋಭಾಯಾತ್ರೆಯ ಮೆರವಣಿಗೆಯ ಪೂರ್ವ ತಯಾರಿ ಬಗ್ಗೆ ಪೋಲಿಸ್ ಸಭೆ

Posted On: 05-10-2022 11:31AM

ಉಚ್ಚಿಲ : ನವರಾತ್ರಿ ಉತ್ಸವದ ಶೋಭಾಯಾತ್ರೆಯ ಮೆರವಣಿಗೆಯ ಪೂರ್ವ ತಯಾರಿ ಬಗ್ಗೆ ಕಾಪು ಪೋಲಿಸ್ ವೃತ್ತ ನಿರೀಕ್ಷಕರಾದ ಪೂವಯ್ಯ ನೇತೃತ್ವದಲ್ಲಿ ಪೋಲಿಸ್ ಅಧಿಕಾರಿಗಳಿಗೆ, ಪೊಲೀಸ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿಕೆ ಕಾರ್ಯ ಬುಧವಾರ ಉಚ್ಚಿಲದ ಮೊಗವೀರ ಸಭಾ ಭವನದಲ್ಲಿ ಜರಗಿತು.

ಶೋಭಾಯಾತ್ರೆಯ ಕಾರ್ಯದಲ್ಲಿ 14 ಎಸೈ, 2 ಡಿವೈಎಸ್ಪಿ, 4 ಸಿಪಿಐ, 22 ಎಎಸೈ, 133 ರಷ್ಟು ಪಿಸಿಗಳು, 4 ಡಿ ಆರ್ ಪೋಲಿಸ್ ವಾಹನ, 1 ಕೆ ಎಸ್ ಪಿ ವಾಹನ, ಇದರ ಜೊತೆಗೆ 150 ಮಂದಿ ದೇವಳದಿಂದ ನೇಮಿಸಲ್ಪಟ್ಟ ಸ್ವಯಂ ಸೇವಕರು ಇಂದಿನ ಶೋಭಾಯಾತ್ರೆಯ ಬಂದೋಬಸ್ತ್ ಕಾರ್ಯದಲ್ಲಿ ತೊಡಗಲಿರುವರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ವಿಜಯ ಪ್ರಸಾದ್,ಡಿವೈಎಸ್ಪಿ ಸುಧಾಕರ್, ವೃತ್ತ ನಿರೀಕ್ಷಕರಾದ ಅಂತ ಪದ್ಮನಾಭ, ಪ್ರಮೋದ್ ಕುಮಾರ್, ಸಂಪತ್ , ಕೆ ಸಿ ಪೂವಯ್ಯ ಉಪಸ್ಥಿತರಿದ್ದರು.