ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಶ್ರೀ ವೆಂಕಟರಮಣ ದೇವಳ - ಚಂಡಿಕಾ ಯಾಗ ಪೂರ್ಣಾಹುತಿ - ಮಹಾ ಸಮಾರಾಧನೆ ಸಂಪನ್ನ

Posted On: 06-10-2022 11:24AM

ಕಾಪು : ಇಲ್ಲಿನ ಶ್ರೀ ವೆಂಕಟರಮಣ ದೇವಳದಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಒಂಬತ್ತು ದಿನ ನಿತ್ಯ ರಾತ್ರಿ ದುರ್ಗಾ ನಮಸ್ಕಾರ ಸೇವೆಯು ಜರಗಿ ವಿಜಯದಶಮಿ ದಿನದಂದು ಚಂಡಿಕಾ ಯಾಗ ಪೂರ್ಣಾಹುತಿ - ಮಹಾ ಸಮಾರಾಧನೆ ವಿಜೃಂಭಣೆಯಿಂದ ಜರಗಿತು.

ವೇದಮೂರ್ತಿ ಕಮಲಾಕ್ಷ ಭಟ್ ಮಾರ್ಗದರ್ಶನ ದಲ್ಲಿ ವೇದಮೂರ್ತಿ ಶ್ರೀನಿವಾಸ ಭಟ್ ರವರು ಪೂಜಾ ಕೈಂಕರ್ಯವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ, ಆಡಳಿತ ಮಂಡಳಿಯ ಸರ್ವಸದಸ್ಯರು ಹಾಗೂ ಊರ ಪರವೂರ ನೂರಾರು ಭಜಕರು ಪಾಲ್ಗೊಂಡರು.