ಶ್ರೀ ಬಬ್ಬರ್ಯ ದೈವಸ್ಥಾನ ಮೂಡು ಮಟ್ಟಾರು : ತಾಂಬೂಲ ಪ್ರಶ್ನೆಯ ಪರಿಹಾರ ಕ್ರಮ ; ಜೀರ್ಣೋದ್ಧಾರದ ಪೂರ್ವಭಾವಿ ಸಭೆ
Posted On:
10-10-2022 02:43PM
ಕಾಪು : ಶ್ರೀ ಬಬ್ಬರ್ಯ ದೈವಸ್ಥಾನ ಮೂಡು ಮಟ್ಟಾರು ಇಲ್ಲಿ ತಾಂಬೂಲ ಪ್ರಶ್ನೆಯ ಪರಿಹಾರ ಪ್ರಾರಂಭ ಕಾರ್ಯಕ್ರಮಗಳು ಮತ್ತು ಜೀರ್ಣೋದ್ಧಾರ ಮಾಡುವ ಬಗ್ಗೆ ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ್ ಹೆಗ್ಡೆ ಯವರ ಮುಂದಾಳತ್ವದಲ್ಲಿ ಪ್ರಥಮ ಪೂರ್ವಭಾವಿ ಸಭೆ ಮೂಡು ಮಟ್ಟಾರು ಬಬ್ಬರ್ಯ ಸಾನಿಧ್ಯದಲ್ಲಿ ಅಕ್ಟೋಬರ್ 9ರಂದು ನಡೆಯಿತು.
ಕೇಂಜ ಶ್ರೀಧರ್ ತಂತ್ರಿ ಮತ್ತು ಗುಂಡು ಭಟ್ ಇವರ ತಂಬೂಲ ಪ್ರಶ್ನೆಯಲ್ಲಿ ಕಂಡುಬಂದಂತಹ ಪರಿಹಾರ ಕಾರ್ಯಕ್ರಮಗಳನ್ನು ಮಾಡುವ ದಿನಾಂಕ ಮತ್ತು ವಿವಿಧ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಜಯಪ್ರಕಾಶ್ ಪ್ರಭು ಅಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಕಾಪು ತಾಲೂಕು , ಸುರೇಶ ನಾಯಕ್ ಮಟ್ಟಾರು , ಗೋಪಾಲ್ ನಾಯ್ಕ್ ಮಟ್ಟಾರು , ಪ್ರಸಾದ್ ಶೆಟ್ಟಿ, ಮೂಡು ಮಟ್ಟಾರು ದೈವಸ್ಥಾನ ಆಡಳಿತ ಕಮಿಟಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಗೌರವಾ ಧ್ಯಕ್ಷ ಶಂಕರ್ ಶೆಟ್ಟಿ ಉಪಸ್ಥಿತರಿದ್ದರು.
ಕಮಿಟಿ ಕಾರ್ಯದರ್ಶಿ ಹರೀಶ್ ಪೂಜಾರಿ ಸ್ವಾಗತಿಸಿದರು. ಕೋಶಾಧಿಕಾರಿ ರವಿ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.