ಪಡುಬಿದ್ರಿ : ಪ್ರೇರಣೆಯಿಲ್ಲದೆ ಯಾವುದೇ ಕಾರ್ಯ ನಡೆಯದು. ಅದು ವಿಜ್ಞಾಪನ ಪತ್ರದ ಮೂಲಕ ಈ ಸಮಾಜಕ್ಕೆ ತಲುಪಲಿದೆ. ಸಂಕಲ್ಪವು ಮಹಾ ಸಂಕಲ್ಪವಾಗಿ ಮೂಡಿದಾಗ ಸಂಪತ್ತು ಕ್ರೋಢೀಕರಣ ಸಾಧ್ಯ. ಮನುಷ್ಯ ಪ್ರಯತ್ನ ಜತೆಗೆ ದೈವಾನುಗ್ರಹ ಇದ್ದರೆ ಕಾರ್ಯ ಸಾಧ್ಯ. ಈ ಸಾನಿಧ್ಯದ ಸಂಕಲ್ಪ ಮಹಾ ಸಂಕಲ್ಪವಾಗಿ ಜೀರ್ಣೋದ್ಧಾರವಾಗಲಿ ಎಂದು
ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು
ಹೇಳಿದರು.
ಅವರು ಕಾಪು ತಾಲೂಕಿನ ಸಾವಿರಾರು ವರ್ಷಗಳ ಇತಿಹಾಸವಿರುವ ಪಡುಬಿದ್ರಿಯ ಶ್ರೀ ಆದಿಶಕ್ತಿ ಆದಿ ಮಾಯೆ ಅಣ್ಣಪ್ಪ ಪಂಜುರ್ಲಿ ಮಂತ್ರ ದೇವತೆ ಹಾಗೂ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಅಕ್ಟೋಬರ್ 22ರಂದು ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ವಿಜ್ಞಾಪನ ಪತ್ರ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಗಣ್ಯರ ಸಮ್ಮುಖ ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಜೀರ್ಣೋದ್ದಾರದ ನೀಲನಕ್ಷೆ ಮತ್ತು ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಚ್ಚಿದಾನಂದ ಶೆಟ್ಟಿ, ಕ್ಷೇತ್ರದ ಧರ್ಮದರ್ಶಿಗಳಾದ ಸುಧಾಕರ ಮಡಿವಾಳ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ ಬೆಳಪು, ಕಿಶೋರ್ ಶೆಟ್ಟಿ, ಕಂಚನ್ ರಮೇಶ್ ಕಾಂಚನ್, ಸದಾನಂದ ಸಾಲಿಯಾನ್, ಶ್ರೀಕರ್ ಶೆಟ್ಟಿ ಕಾಪು, ಪ್ರಕಾಶ್ ಶೆಟ್ಟಿ ಪಡುಹಿತ್ಲು, ವಿನೋದ್ ಶೆಟ್ಟಿ, ಮಮತಾ ಪಿ ಶೆಟ್ಟಿ, ನೀತಾ ಪ್ರಭು, ಶ್ಯಾಮಲ ಕುಂದರ್, ನಿತಿನ್ ಪೂಜಾರಿ, ದಿನೇಶ್ ಶೆಟ್ಟಿ ಕಾಪು ಕಲ್ಯ, ಕರಿಯ ಶೆಟ್ಟಿ ಉಪಸ್ಥಿತರಿದ್ದರು.
ಅಮೃತಾ ಹಾಗು ಯಶೋಧ ಪ್ರಾರ್ಥಿಸಿದರು.
ಪ್ರಕಾಶ್ ಶೆಟ್ಟಿ ಪಡುಹಿತ್ಲು ಸ್ವಾಗತಿಸಿದರು.
ಸದಾನಂದ ಸಾಲ್ಯಾನ್ ಕೆರ್ವಾಶೆ ಪ್ರಸ್ತಾವನೆಗೈದರು. ಪ್ರೀತಿ ಕಲ್ಯಾಣಪುರ ಕಾರ್ಯಕ್ರಮ ಸಂಯೋಜಿಸಿ, ಸ್ವಾತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಶೆಟ್ಟಿ ಕಾಪು ಕಲ್ಯ ವಂದಿಸಿದರು.