ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಯುವಸಂಗಮ‌ ಕಾಂತಾವರದಿಂದ ದೀಪಾವಳಿ ಆಚರಣೆ

Posted On: 27-10-2022 02:11PM

ಕಾಂತಾವರ : ಯುವಸಂಗಮ ಕಾಂತಾವರ (ರಿ.) ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 4ನೇ ವರ್ಷದ ಲಕ್ಷ್ಮೀ ಪೂಜೆ ಹಾಗೂ ಸಾಮೂಹಿಕ ವಾಹನ ಪೂಜೆಯು ಬಾಲಕೃಷ್ಣ ಭಟ್ ಇವರ ವೈದಿಕತ್ವದಲ್ಲಿ ಅಕ್ಟೋಬರ್ 26 ರಂದು ಮಿತ್ತಲಚ್ಚಿಲು ವಠಾರದಲ್ಲಿ ಜರಗಿತು‌‌.

ಈ ಸಂದರ್ಭದಲ್ಲಿ ಊರ ನಾಗರೀಕರು, ಕಾಂತಾವರ ಗ್ರಾಮ ಪಂಚಾಯತ್ ಸದಸ್ಯರು, ಯುವಸಂಗಮ ಕಾಂತಾವರದ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸರ್ವ ಸದಸ್ಯರು ,ಯುವ ಉತ್ಸಾಹಿ ಬಳಗ ಕೇಮಾರು ಸದಸ್ಯರು ಉಪಸ್ಥಿತರಿದ್ದರು‌.