ಕಾಪು : ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಾಪು ತಾಲೂಕಿನ ಮೂಳೂರಿನ ಪಿಲಿ ಕೋಲ ನರ್ತಕರಾದ ಗುಡ್ಡ ಪಾಣಾರ ಅವರಿಗೆ ನವೆಂಬರ್ 6, ಆದಿತ್ಯವಾರದಂದು ಸಂಜೆ ಗಂಟೆ 3:30ಕ್ಕೆ ಮೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಇಲ್ಲಿ ಹುಟ್ಟೂರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.