ಇನ್ನಂಜೆ : ಇಲ್ಲಿನ ಇನ್ನಂಜೆ ಯುವಕ ಮಂಡಲ (ರಿ) ಇದರ ಸುವರ್ಣಮಹೋತ್ಸವ ಕಟ್ಟಡದ ವಿಜ್ಞಾಪನಾ ಪತ್ರವನ್ನು ಸೋದೆ ವಾದಿರಾಜ ಮಠದ ಯತಿಗಳಾದ ವಿಶ್ವವಲ್ಲಭ ತೀರ್ಥರು ಹಾಗೂ ಇನ್ನಂಜೆಯ ಉದ್ಯಮಿ ಗ್ರೇಗೊರಿ ಮಥಾಯಸ್ ಬಿಡುಗಡೆಗೊಳಿಸಿದರು.
ಈ ಸಂದರ್ಭ ಸಲಹಾ ಸಮಿತಿಯ ಸದಸ್ಯರುಗಳಾದ ನಂದನ್ ಕುಮಾರ್ ಮತ್ತು ರವಿವರ್ಮ ಶೆಟ್ಟಿ ಮತ್ತು ಯುವಕ ಮಂಡಲದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷರುಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.