ಬಂಟಕಲ್ಲು : ವಿಕಾಸ ಸೇವಾ ಸಮಿತಿ ಮತ್ತು ಸ್ಥಳೀಯರಿಂದ 92ನೇ ಹೇರೂರು ಬ್ರಹ್ಮನಗರದಿಂದ ಕಲ್ಲುಗುಡ್ಡೆ ಹೋಗುವ ರಸ್ತೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಲಾಯಿತು.
ನಮ್ಮ ಗ್ರಾಮದ ಜವಾಬ್ದಾರಿಯುತ ವ್ಯಕ್ತಿಗಳು ಸ್ಪಂದಿಸದಿದ್ದರೆ ಗ್ರಾಮಸ್ಥರೇ ಜವಾಬ್ದಾರಿ ವಹಿಸಬೇಕೆಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ದಯಾನಂದ ಪೂಜಾರಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ವಿಕಾಸ ಸೇವಾ ಸಮಿತಿ ಅಧ್ಯಕ್ಷ ಮಾಧವಾಚಾರ್ಯ, ಸದಸ್ಯರಾದ ಗಂಗಾಧರ ಆಚಾರ್ಯ, ಬಂಟಕಲ್ಲು ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಸದಸ್ಯರಾದ ಶೈಲೇಶ್, ಕಲ್ಲು ಗುಡ್ಡೆ ಅನಿಲ್ ಸುನಿಲ್, ಚೇತನ್, ಬಂಟಕಲ್ಲು ಕಾರು ಮಾಲಕ ಮತ್ತು ಚಾಲಕ ಸಂಘದ ಸದಸ್ಯರಾದ ಯಶವಂತ್ ಮತ್ತಿತರರು ಉಪಸ್ಥಿತರಿದ್ದರು.