ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಡಿಸೆಂಬರ್ 30ರಂದು ಸೋಮನಾಥ ಎಸ್.ಕರ್ಕೇರರ 'ಹನಿ-ಧ್ವನಿ' ಹನಿಗವನ ಸಂಕಲನ ಬಿಡುಗಡೆ

Posted On: 28-12-2022 08:33PM

ಕಾಪು : ಮೂಲತಃ ಕಾಪು ನಿವಾಸಿಯಾಗಿರುವ ಪ್ರಸ್ತುತ ಮುಂಬೈ ವಾಸಿಯಾಗಿರುವ ಲೇಖಕ ಹಾಗೂ ಕವಿ ಸೋಮನಾಥ ಎಸ್.ಕರ್ಕೇರರ ನೂರು ಹನಿಗವನಗಳ ಸಂಕಲನ 'ಹನಿ-ಧ್ವನಿ' ಇದರ ದ್ವಿತೀಯ ಮುದ್ರಣದ ಬಿಡುಗಡೆ ಸಮಾರಂಭವು ಶುಕ್ರವಾರ ಡಿಸೆಂಬರ್ 30 ರಂದು ಸಂಜೆ ಗಂಟೆ 6:30ಕ್ಕೆ ಚೆಂಬೂರಿನ ಫೈನ್ ಆರ್ಟ್ ಸೊಸೈಟಿಯ ಆರ್ ಸಿ ಎಫ್ ಸಭಾಂಗಣದಲ್ಲಿ ಜರಗಲಿದೆ.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಾಗೂ ಕನಕ ಸಭಾ ಪರ್ಫಾಮಿಂಗ್ ಆರ್ಟ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಜರಗಲಿರುವ ಈ ಸಮಾರಂಭದಲ್ಲಿ ಸೋಮಯ್ಯಾ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ.ಎಸ್ ಕೆ ಭವಾನಿಯವರು ಕೃತಿ ಬಿಡುಗಡೆ ಮಾಡಲಿದ್ದು ಕವಯಿತ್ರಿ, ಲೇಖಕಿ ಅನಿತಾ ಪೂಜಾರಿ ತಾಕೋಡೆ ಇವರು ಕೃತಿ ಪರಿಚಯ ಮಾಡಲಿದ್ದಾರೆ.

ನವಿ ಮುಂಬಯಿಯ ಅಕ್ಷರ ಗಂಗಾ ಪ್ರಕಾಶನದ ವತಿಯಿಂದ ಪ್ರಕಟಗೊಂಡ 'ಹನಿ-ಧ್ವನಿ'ಯ ಪ್ರಥಮ ಮುದ್ರಣವು 2020ರಲ್ಲಿ ಬಿಡುಗಡೆಗೊಂಡಿದ್ದು ಇದೀಗ ಇದರ ಎರಡನೇ ಮುದ್ರಣವು ಓದುಗರ ಕೈಸೇರುತ್ತಿದೆ. ಈ ಕೃತಿಯು ಈಗಾಗಲೇ ಕಳೆದ ಅಕ್ಟೋಬರ್ 21 ರಂದು ದುಬೈಯ ಬುರ್‌ಪ್ರಾಂತದ ಲಾಕ್ವೆಂಟಾ ಹೋಟೆಲ್‌ನಲ್ಲಿ ಬಿಡುಗಡೆಗೊಂಡಿದ್ದು ಇದೀಗ ಮುಂಬಯಿಯಲ್ಲಿ ಬಿಡುಗಡೆಗೊಳ್ಳಲಿದೆ.

ಈ ತನಕ ಸೋಮನಾಥ ಎಸ್. ಕರ್ಕೇರರ 'ಇಡ್ಲಿ ತಿನ್ನುವ ಸ್ಪರ್ಧೆ', 'ನುಂಗಣ್ಣ ಆಯೋಗದ ವರದಿ ' ಮತ್ತು 'ಹನಿ-ಧ್ವನಿ' ಎಂಬ ಮೂರು ಕನ್ನಡ ಕೃತಿಗಳು ಹೊರ ಬಂದಿದ್ದು ಇವರ ನಗೆ ಲೇಖನಗಳು, ಹನಿಗವನಗಳು, ಹನಿ ಕತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.