ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಗೆಳೆಯರ ಬಳಗ ಬಂಗ್ಲೆ ಮೈದಾನ ಕಾಪು : 31ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

Posted On: 03-01-2023 10:24AM

ಕಾಪು : ಗೆಳೆಯರ ಬಳಗ ಬಂಗ್ಲೆ ಮೈದಾನ ಕಾಪು ಇದರ ವತಿಯಿಂದ 31ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮವು ಕಾಪು ಬಂಗ್ಲೆ ಮೈದಾನದಲ್ಲಿ ವೇದಮೂರ್ತಿ ಮಾನಿಯುರು ಮುಖ್ಯಪ್ರಾಣ ಆಚಾರ್ಯರ ಉಪಸ್ಥಿತಿಯಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರಗಿತು.

ಈ ಸಂದರ್ಭದಲ್ಲಿ 2022ನೇ ವರ್ಷದಲ್ಲಿ ಜಾನಪದ ಕಲಾ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕಾಪು ತಾಲೂಕಿನ ಮೂಳೂರು ಗ್ರಾಮದ ದೈವ ನರ್ತಕ ಗುಡ್ಡ ಪಾಣಾರರನ್ನು ಸಮ್ಮಾನಿಸಲಾಯಿತು.

ವೇದಿಕೆಯಲ್ಲಿ ಬಳಗದ ಅಧ್ಯಕ್ಷರಾದ ಜಯ ವೈ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಚ್ಚೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಘುರಾಮ್ ನಾಯಕ್, ಕಾಪು ಪುರಸಭಾ ಬೀಡು ಬದಿ ವಾರ್ಡಿನ ಸದಸ್ಯರಾದ ಅನಿಲ್ ಕುಮಾರ್ ಮತ್ತು ಪೂಜಾ, ಅರ್ಚಕರಾದ ಮಾಣಿಯೂರು ಸೂರ್ಯಕಾಂತ ಆಚಾರ್ಯ ಉಪಸ್ಥಿತರಿದ್ದರು.

ಬಳಗದ ಸಂಚಾಲಕ ರವೀಂದ್ರ ಎಂ ಸ್ವಾಗತಿಸಿ ವಂದಿಸಿದರು. ತದನಂತರ ಶ್ರೀ ಲಕ್ಷಿಜನಾರ್ದನ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು ಹಾಗೂ ಅನ್ನಸಂತರ್ಪಣೆ ನಡೆಯಿತು.