ಕಾಪು : ಮಜೂರು ನಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರಗಳ ದೈವಸ್ಥಾನದಲ್ಲಿ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರಗಳ ದೈವಗಳ ಪುನಃ ಪ್ರತಿಷ್ಠೆಯು ಶ್ರೀನಿವಾಸ ಭಟ್ ಮಜೂರು ಅವರ ನೇತೃತ್ವದಲ್ಲಿ ಸಂಪನ್ನಗೊಂಡಿತು.
ಆ ಪ್ರಯುಕ್ತ ಬೆಳಗ್ಗೆ ಪ್ರತಿಷ್ಟಾ ಹೋಮ, ಪ್ರತಿಷ್ಠೆ, ದೈವದರ್ಶನ ಮತ್ತು ಕಲಶಾಭಿಷೇಕ ನಡೆದು ಬಳಿಕ ಪ್ರಸನ್ನ ಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಸೇರಿದಂತೆ ಬಬ್ಬು ಸ್ವಾಮಿ, ತನ್ನಿಮಾನಿಗ ಹಾಗೂ ಪರಿವಾರ ದೈವಗಳ ನೇಮೋತ್ಸವ ವಿಜೃಂಭಣೆ ಯಿಂದ ನೆರವೇರಿತು.
ಸಾವಿರಾರು ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಗಂಧಪ್ರಸಾಧ ಸ್ವೀಕರಿಸಿದರು.